<p><strong>ಗಂಗಾವತಿ: </strong>ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣಭಾಗದ 19 ಪರೀಕ್ಷಾ ಕೇಂದ್ರಗಳಲ್ಲಿ ಹತ್ತನೇ ವರ್ಗದ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಸೋಮವಾರ ನಡೆದ ಮಾತೃಭಾಷೆ ಕನ್ನಡ/ಉರ್ದು/ಇಂಗ್ಲಿಷ್ ಪರೀಕ್ಷೆ ಬಹುತೇಕ ಅಚ್ಚುಕಟ್ಟಾಗಿ ನಡೆಯಿತು. <br /> <br /> ಸಮಯ ಮೀರಿ ಬಂದ ಮಕ್ಕಳಿಗೆ ಪರೀಕ್ಷಾಕೇಂದ್ರಕ್ಕೆ ಪ್ರವೇಶ ಕಲ್ಪಿಸದ್ದರಿಂದ ಒಂದೆರಡು ಕೇಂದ್ರದಲ್ಲಿ ಮೇಲ್ವಿಚಾರಕರೊಂದಿಗೆ ವಿದ್ಯಾರ್ಥಿ ಮತ್ತು ಪಾಲಕರ ಮಾತಿನ ಚಕಮಕಿ, ಪ್ರವೇಶಪತ್ರ ಬಂದಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. <br /> <br /> ಇದರ ಹೊರತಾಗಿ ಸೋಮವಾರದ ಪರೀಕ್ಷೆಗೆ ಕುಳಿತುಕೊಳ್ಳಬೇಕಿದ್ದ ಒಟ್ಟು 5249 ವಿದ್ಯಾರ್ಥಿಗಳಲ್ಲಿ <br /> ಗಂಡು 2499, ಹೆಣ್ಣು 2550 ಸೇರಿ ಒಟ್ಟು 5049 ಮಕ್ಕಳು ಹಾಜರಾಗಿದ್ದರು. 200 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. <br /> <br /> <strong>ಮಾತಿನ ಚಕಮಕಿ: </strong>ನಗರದ ಜನತಾ ಸೇವಾ ಶಿಕ್ಷಣ ಸಂಸ್ಥೆ ಮತ್ತು ನವಲಿಯ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಮತ್ತು ಪಾಲಕರ ಮಧ್ಯೆ ಮಾತಿನ ಚಕಮಕಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. <br /> <br /> ಪರೀಕ್ಷೆ 10.30ಕ್ಕೆ ಆರಂಭವಾಗಿದ ಬಳಿಕ ಸುಮಾರು 15 ನಿಮಿಷ ತಡವಾಗಿ ಆಗಮಿಸಿದ ಒಂದೆರಡು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಮೇಲ್ವಿಚಾರಕರು ನಿರಾಕರಿಸಿದ್ದರಿಂದ ಮಾತಿನಚಕಮಕಿ ನಡೆಯಿತು. ಸ್ಥಳೀಯರ ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹಾರವಾಯಿತು ಎಂದು ತಿಳಿದು ಬಂದಿದೆ.<br /> <br /> ವಿದ್ಯಾರ್ಥಿಗಳಿಂದ ಧರಣಿ: ಪ್ರವೇಶಪತ್ರ ರವಾನೆಯಾಗದ್ದರಿಂದ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಸೋಮವಾರ ನಡೆದ ಕನ್ನಡ ಪರೀಕ್ಷೆಯಿಂದ ವಂಚಿತರಾದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಿಇಒ ಕಚೇರಿ ಎದುರು ಧರಣಿ ನಡೆಸಿದರು. `ಶಾಲೆಯ ಮುಖ್ಯಸ್ಥರು ನಮ್ಮನ್ನು ಉದ್ದೇಶ ಪೂರ್ವಕ ಪರೀಕ್ಷೆಯಿಂದ ವಂಚಿತಗೊಳಿಸಿದ್ದಾರೆ~ ಎಂದು ಮಹೆಬೂಬ ಪಾಶ, ರವಿ, ಶರಣಪ್ಪ, ಮಹೆಬೂಬ, ನಬೀಸಾಬ, ಸೈಯದ್, ನಾಗರಾಜ, ಕಲಂದರ್ ಮತ್ತು ಸೈಯದ್ ಶಕ್ಷಾವಲಿ ಆರೋಪಿಸಿದರು. <br /> <br /> ಇದಕ್ಕೆ ಪ್ರತಿಕ್ರಿಯಿಸಿದ ಶಾಲೆಯ ಉಪ ಪ್ರಾಚಾರ್ಯ ಬಸವರಾಜ ಪಾಟೀಲ್, `ಶೇ, 75ಕ್ಕಿಂತ ಕಡಿಮೆ ಹಾಜರಾತಿ ಇರುವ ಮಕ್ಕಳಿಗೆ ಪರೀಕ್ಷೆಗೆ ಅವಕಾಶ ಮಾಡದಂತೆ ಸರ್ಕಾರದ ಆದೇಶವಿದೆ. ಮಕ್ಕಳ ಹಾಜರಾತಿಯ ಬಗ್ಗೆ ಅವರ ಪಾಲಕರ ಗಮನಕ್ಕೂ ಮಾಹಿತಿ ಇದೆ~ ಎಂದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣಭಾಗದ 19 ಪರೀಕ್ಷಾ ಕೇಂದ್ರಗಳಲ್ಲಿ ಹತ್ತನೇ ವರ್ಗದ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಸೋಮವಾರ ನಡೆದ ಮಾತೃಭಾಷೆ ಕನ್ನಡ/ಉರ್ದು/ಇಂಗ್ಲಿಷ್ ಪರೀಕ್ಷೆ ಬಹುತೇಕ ಅಚ್ಚುಕಟ್ಟಾಗಿ ನಡೆಯಿತು. <br /> <br /> ಸಮಯ ಮೀರಿ ಬಂದ ಮಕ್ಕಳಿಗೆ ಪರೀಕ್ಷಾಕೇಂದ್ರಕ್ಕೆ ಪ್ರವೇಶ ಕಲ್ಪಿಸದ್ದರಿಂದ ಒಂದೆರಡು ಕೇಂದ್ರದಲ್ಲಿ ಮೇಲ್ವಿಚಾರಕರೊಂದಿಗೆ ವಿದ್ಯಾರ್ಥಿ ಮತ್ತು ಪಾಲಕರ ಮಾತಿನ ಚಕಮಕಿ, ಪ್ರವೇಶಪತ್ರ ಬಂದಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. <br /> <br /> ಇದರ ಹೊರತಾಗಿ ಸೋಮವಾರದ ಪರೀಕ್ಷೆಗೆ ಕುಳಿತುಕೊಳ್ಳಬೇಕಿದ್ದ ಒಟ್ಟು 5249 ವಿದ್ಯಾರ್ಥಿಗಳಲ್ಲಿ <br /> ಗಂಡು 2499, ಹೆಣ್ಣು 2550 ಸೇರಿ ಒಟ್ಟು 5049 ಮಕ್ಕಳು ಹಾಜರಾಗಿದ್ದರು. 200 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. <br /> <br /> <strong>ಮಾತಿನ ಚಕಮಕಿ: </strong>ನಗರದ ಜನತಾ ಸೇವಾ ಶಿಕ್ಷಣ ಸಂಸ್ಥೆ ಮತ್ತು ನವಲಿಯ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಮತ್ತು ಪಾಲಕರ ಮಧ್ಯೆ ಮಾತಿನ ಚಕಮಕಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. <br /> <br /> ಪರೀಕ್ಷೆ 10.30ಕ್ಕೆ ಆರಂಭವಾಗಿದ ಬಳಿಕ ಸುಮಾರು 15 ನಿಮಿಷ ತಡವಾಗಿ ಆಗಮಿಸಿದ ಒಂದೆರಡು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಮೇಲ್ವಿಚಾರಕರು ನಿರಾಕರಿಸಿದ್ದರಿಂದ ಮಾತಿನಚಕಮಕಿ ನಡೆಯಿತು. ಸ್ಥಳೀಯರ ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹಾರವಾಯಿತು ಎಂದು ತಿಳಿದು ಬಂದಿದೆ.<br /> <br /> ವಿದ್ಯಾರ್ಥಿಗಳಿಂದ ಧರಣಿ: ಪ್ರವೇಶಪತ್ರ ರವಾನೆಯಾಗದ್ದರಿಂದ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಸೋಮವಾರ ನಡೆದ ಕನ್ನಡ ಪರೀಕ್ಷೆಯಿಂದ ವಂಚಿತರಾದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಿಇಒ ಕಚೇರಿ ಎದುರು ಧರಣಿ ನಡೆಸಿದರು. `ಶಾಲೆಯ ಮುಖ್ಯಸ್ಥರು ನಮ್ಮನ್ನು ಉದ್ದೇಶ ಪೂರ್ವಕ ಪರೀಕ್ಷೆಯಿಂದ ವಂಚಿತಗೊಳಿಸಿದ್ದಾರೆ~ ಎಂದು ಮಹೆಬೂಬ ಪಾಶ, ರವಿ, ಶರಣಪ್ಪ, ಮಹೆಬೂಬ, ನಬೀಸಾಬ, ಸೈಯದ್, ನಾಗರಾಜ, ಕಲಂದರ್ ಮತ್ತು ಸೈಯದ್ ಶಕ್ಷಾವಲಿ ಆರೋಪಿಸಿದರು. <br /> <br /> ಇದಕ್ಕೆ ಪ್ರತಿಕ್ರಿಯಿಸಿದ ಶಾಲೆಯ ಉಪ ಪ್ರಾಚಾರ್ಯ ಬಸವರಾಜ ಪಾಟೀಲ್, `ಶೇ, 75ಕ್ಕಿಂತ ಕಡಿಮೆ ಹಾಜರಾತಿ ಇರುವ ಮಕ್ಕಳಿಗೆ ಪರೀಕ್ಷೆಗೆ ಅವಕಾಶ ಮಾಡದಂತೆ ಸರ್ಕಾರದ ಆದೇಶವಿದೆ. ಮಕ್ಕಳ ಹಾಜರಾತಿಯ ಬಗ್ಗೆ ಅವರ ಪಾಲಕರ ಗಮನಕ್ಕೂ ಮಾಹಿತಿ ಇದೆ~ ಎಂದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>