<p><strong>ಶಿಡ್ಲಘಟ್ಟ:</strong> ಪಟ್ಟಣದಲ್ಲಿ ಸೋಮವಾರ ನಡೆದ ಪುರಸಭೆ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.<br /> <br /> ಜೆಡಿಎಸ್ ಸದಸ್ಯರೊಂದಿಗೆ ಪುರಸಭೆ ಆವರಣಕ್ಕೆ ಬಂದ ಸದಸ್ಯೆ ವಹೀದಾ, ಏಕಾಏಕಿ ಕಾಂಗ್ರೆಸ್ ಮುಖಂಡರಿದ್ದ ಗುಂಪಿನೆಡೆಗೆ ಓಡಿದ್ದು ಹಲವು ಊಹಾಪೋಹಗಳನ್ನು ಹುಟ್ಟುಹಾಕಿತು.<br /> <br /> ಇಲ್ಲಿನ ಪುರಸಭೆಗೆ ಹದಿನೇಳನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಮುಷ್ಠರಿ ತನ್ವೀರ್ ಅಧ್ಯಕ್ಷೆಯಾಗಿ, ಎಂಟನೇ ವಾರ್ಡ್ನ ಜೆಡಿಎಸ್ ಸದಸ್ಯೆ ಸುಮಿತ್ರಾ ರಮೇಶ್ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.<br /> <br /> ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಲಾಗಿತ್ತು. ಪರಿಶಿಷ್ಟ ಜಾತಿಯ ಏಕೈಕ ಮಹಿಳಾ ಅಭ್ಯರ್ಥಿ ಜೆಡಿಎಸ್ ಸುಮಿತ್ರಾ ರಮೇಶ್ ಬಹುಮತದ ಕೊರತೆಯಿದ್ದರೂ ಉಪಾಧ್ಯಕ್ಷೆ ಆಗುವುದು ಬಹುತೇಕ ಖಚಿತವಾಗಿತ್ತು.<br /> <br /> 27 ಮಂದಿ ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 14, ಜೆಡಿಎಸ್ 11, ಬಿಜೆಪಿ 1 ಹಾಗೂ ಪಕ್ಷೇತರ ಅಭ್ಯರ್ಥಿ ಒಬ್ಬರು ಇದ್ದಾರೆ. ಸಂಖ್ಯಾ ಬಲ ಹೆಚ್ಚಿರುವ ಕಾಂಗ್ರೆಸ್ನಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಕುತೂಹಲವಿತ್ತು. <br /> <br /> ಕೆಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಕಾಂಗ್ರೆಸ್ನ 13 ಸದಸ್ಯರು ಮಿನಿಬಸ್ನಲ್ಲಿ ಬಂದಿಳಿದರು. ನಂತರ ಶಾಸಕ ಎಂ.ರಾಜಣ್ಣ ಅವರೊಂದಿಗೆ ಜೆಡಿಎಸ್ನ 11 ಸದಸ್ಯರು, ಬಿಜೆಪಿಯ ಒಬ್ಬ ಸದಸ್ಯ, ಪಕ್ಷೇತರ ಸದಸ್ಯ ಹಾಗೂ ಕಾಂಗ್ರೆಸ್ನ 26 ನೇ ವಾರ್ಡ್ ಸದಸ್ಯೆ ವಹೀದಾ ಆಗಮಿಸಿದರು.<br /> <br /> ಜೆಡಿಎಸ್ ಸದಸ್ಯರೊಂದಿಗೆ ಆಗಮಿಸಿದ ಕಾಂಗ್ರೆಸ್ ಸದಸ್ಯೆ ವಹೀದಾ ನೋಡನೋಡುತ್ತಿದ್ದಂತೆ ಪುರಸಭೆ ಹೊರಗೆ ನಿಂತಿದ್ದ ಕಾಂಗ್ರೆಸ್ ಮುಖಂಡರ ಗುಂಪಿನ ಕಡೆಗೆ ಓಡಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಆಕೆಗೆ ಭದ್ರತೆ ನೀಡಿ ಕಚೇರಿಯೊಳಗೆ ಕರೆದೊಯ್ದರು.<br /> ಶಾಸಕರು, ಬಿಜೆಪಿ ಸದಸ್ಯ, ಪಕ್ಷೇತರ ಸದಸ್ಯರ ಮತದೊಂದಿಗೆ ಒಬ್ಬ ಕಾಂಗ್ರೆಸ್ ಸದಸ್ಯೆಯನ್ನು ಮನವೊಲಿಸಿದ್ದ ಜೆಡಿಎಸ್, ಹದಿನೈದು ಮತ ಪಡೆದು ಅಧ್ಯಕ್ಷ ಸ್ಥಾನ ಏರಲು ಪ್ರಯತ್ನಿಸಿತ್ತು. ಆದರೆ ಜೆಡಿಎಸ್ ಕಡೆಗೆ ವಾಲಿದ್ದ ಅಧ್ಯಕ್ಷ ಗಾದಿ, ಸ್ವಲ್ಪದರಲ್ಲೇ ಕಾಂಗ್ರೆಸ್ ಪಾಲಾಯಿತು.<br /> <br /> ಪುರಸಭೆ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೊರಗಡೆಯಿಂದ ಕಾಂಗ್ರೆಸ್ ಮುಖಂಡ ತೋಪಡಾ ನಾಗರಾಜ್ ಅವರು ಪಕ್ಷೇತರ ಅಭ್ಯರ್ಥಿ ಕಿಶನ್ ಜೆಡಿಎಸ್ ಬೆಂಬಲಿಸಿದ್ದಕ್ಕೆ ಅವಾಚ್ಯ ಶಬ್ದದಿಂದ ನಿಂದಿಸಿದರು ಎಂಬ ಕಾರಣಕ್ಕೆ ಜೆಡಿಎಸ್ ಸದಸ್ಯರು ಕೂಗಾಡಿದ ಘಟನೆ ನಡೆಯಿತು.<br /> <br /> ನಾಗರಾಜ್ ಅವರನ್ನು ಬಂಧಿಸಬೇಕು ಎಂದು ಜೆಡಿಎಸ್ ಸದಸ್ಯರು ಪೊಲೀಸರನ್ನು ಒತ್ತಾಯಿಸಿದರು. ಆಗ ಮಧ್ಯ ಪ್ರವೇಶಿಸಿದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಚುನಾವಣೆ ನಡೆಯುವ ವೇಳೆ ಕಚೇರಿ ಬಳಿ ಬಂದು ಈ ರೀತಿ ಕೆಟ್ಟದಾಗಿ ಮಾತನಾಡುವುದು, ನಡೆದುಕೊಳ್ಳುವುದು ತಪ್ಪು ಎಂದು ಹೇಳಿದರು. ಕೋಪಗೊಂಡಿದ್ದ ಜೆಡಿಎಸ್ ಸದಸ್ಯರನ್ನು ಸಮಾಧಾನಗೊಳಿಸಿದರು.<br /> <br /> ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮುಷ್ಠರಿ ತನ್ವೀರ್ ಹಾಗೂ ಜೆಡಿಎಸ್ನ ಪ್ರಭಾವತಿ ಸುರೇಶ್ ಪೈಪೋಟಿ ನಡೆಸಿದ್ದರು. ಮುಷ್ಠರಿ ತನ್ವೀರ್ 15 ಮತ ಪಡೆದು, ಜೆಡಿಎಸ್ನ ಪ್ರಭಾವತಿ ಸುರೇಶ್ ಅವರನ್ನು 1 ಮತದ ಅಂತರದಿಂದ ಪರಾಭವಗೊಳಿಸಿದರು.<br /> <br /> ಚುನಾವಣೆ ಅಧಿಕಾರಿಯಾಗಿದ್ದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ. ಶಾಸಕ ಎಂ.ರಾಜಣ್ಣ, ಪುರಸಭೆ ಮುಖ್ಯಾಧಿಕಾರಿ ರಾಮ್ಪ್ರಕಾಶ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಶಿರಸ್ತೇದಾರ್ ಪ್ರಕಾಶ್ ಹಾಜರಿದ್ದರು.<br /> <br /> <strong>‘ಗಲತ್ ಕರ್ನಕ್ಕೋ, ಗಲತ್ ಕರ್ನಕ್ಕೋ’</strong></p>.<p><strong>ಶಿಡ್ಲಘಟ್ಟ:</strong> ಪಟ್ಟಣದ ಪುರಸಭೆ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವುದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯೆ ವಹೀದಾ ಅವರಿಗೆ ಕೆಲವರು ‘ಗಲತ್ ಕರ್ನಕ್ಕೋ, ಗಲತ್ ಕರ್ನಕ್ಕೋ’ ಎಂದು ಬುದ್ಧಿ ಮಾತು ಹೇಳಿದ ಘಟನೆ ಸೋಮವಾರ ನಡೆಯಿತು.<br /> <br /> ಕಾಂಗ್ರೆಸ್ನಿಂದ ಪ್ರತ್ಯೇಕಗೊಂಡ ವಹೀದಾ ಅವರು ಶಾಸಕ ಎಂ.ರಾಜಣ್ಣ ನೇತೃತ್ವದ ಜೆಡಿಎಸ್ ಸದಸ್ಯರಿದ್ದ ವಾಹನದಿಂದ ಕೆಳಗಿಳಿದರು. ಮರುಕ್ಷಣವೇ ಜೆಡಿಎಸ್ ತಂಡದಿಂದ ದೂರಗೊಂಡು ಕಾಂಗ್ರೆಸ್ ಮುಖಂಡರ ಗುಂಪಿನತ್ತ ಓಡಿದರು. ಅನಿರೀಕ್ಷಿತ ಬೆಳವಣಿಗೆಯಿಂದ ಆಘಾತಕ್ಕೆ ಒಳಗಾದ ಜೆಡಿಎಸ್ ಸದಸ್ಯರು ಆಕೆಯನ್ನು ಮತ್ತೊಮ್ಮೆ ತಂಡದಲ್ಲಿ ಸೇರಿಸಿಕೊಳ್ಳಲು ಯತ್ನಿಸಿದರು. ಆ ಸಮಯದಲ್ಲೇ ಕೆಲವರು ‘ಗಲತ್ ಕರ್ನಕ್ಕೋ, ಗಲತ್ ಕರುನಕ್ಕೋ’ ಎಂದು ಸೂಕ್ಷ್ಮವಾಗಿ ಹೇಳಿದರು. ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಕಾನ್ಸ್ಟೆಬಲ್ ಮಧ್ಯೆಪ್ರವೇಶಿಸಿದರು. ವಹೀದಾ ಅವರನ್ನು ಸುರಕ್ಷಿತವಾಗಿ ಪುರಸಭೆಯೊಳಗೆ ಕರೆದೊಯ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ:</strong> ಪಟ್ಟಣದಲ್ಲಿ ಸೋಮವಾರ ನಡೆದ ಪುರಸಭೆ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.<br /> <br /> ಜೆಡಿಎಸ್ ಸದಸ್ಯರೊಂದಿಗೆ ಪುರಸಭೆ ಆವರಣಕ್ಕೆ ಬಂದ ಸದಸ್ಯೆ ವಹೀದಾ, ಏಕಾಏಕಿ ಕಾಂಗ್ರೆಸ್ ಮುಖಂಡರಿದ್ದ ಗುಂಪಿನೆಡೆಗೆ ಓಡಿದ್ದು ಹಲವು ಊಹಾಪೋಹಗಳನ್ನು ಹುಟ್ಟುಹಾಕಿತು.<br /> <br /> ಇಲ್ಲಿನ ಪುರಸಭೆಗೆ ಹದಿನೇಳನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಮುಷ್ಠರಿ ತನ್ವೀರ್ ಅಧ್ಯಕ್ಷೆಯಾಗಿ, ಎಂಟನೇ ವಾರ್ಡ್ನ ಜೆಡಿಎಸ್ ಸದಸ್ಯೆ ಸುಮಿತ್ರಾ ರಮೇಶ್ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.<br /> <br /> ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಲಾಗಿತ್ತು. ಪರಿಶಿಷ್ಟ ಜಾತಿಯ ಏಕೈಕ ಮಹಿಳಾ ಅಭ್ಯರ್ಥಿ ಜೆಡಿಎಸ್ ಸುಮಿತ್ರಾ ರಮೇಶ್ ಬಹುಮತದ ಕೊರತೆಯಿದ್ದರೂ ಉಪಾಧ್ಯಕ್ಷೆ ಆಗುವುದು ಬಹುತೇಕ ಖಚಿತವಾಗಿತ್ತು.<br /> <br /> 27 ಮಂದಿ ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 14, ಜೆಡಿಎಸ್ 11, ಬಿಜೆಪಿ 1 ಹಾಗೂ ಪಕ್ಷೇತರ ಅಭ್ಯರ್ಥಿ ಒಬ್ಬರು ಇದ್ದಾರೆ. ಸಂಖ್ಯಾ ಬಲ ಹೆಚ್ಚಿರುವ ಕಾಂಗ್ರೆಸ್ನಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಕುತೂಹಲವಿತ್ತು. <br /> <br /> ಕೆಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಕಾಂಗ್ರೆಸ್ನ 13 ಸದಸ್ಯರು ಮಿನಿಬಸ್ನಲ್ಲಿ ಬಂದಿಳಿದರು. ನಂತರ ಶಾಸಕ ಎಂ.ರಾಜಣ್ಣ ಅವರೊಂದಿಗೆ ಜೆಡಿಎಸ್ನ 11 ಸದಸ್ಯರು, ಬಿಜೆಪಿಯ ಒಬ್ಬ ಸದಸ್ಯ, ಪಕ್ಷೇತರ ಸದಸ್ಯ ಹಾಗೂ ಕಾಂಗ್ರೆಸ್ನ 26 ನೇ ವಾರ್ಡ್ ಸದಸ್ಯೆ ವಹೀದಾ ಆಗಮಿಸಿದರು.<br /> <br /> ಜೆಡಿಎಸ್ ಸದಸ್ಯರೊಂದಿಗೆ ಆಗಮಿಸಿದ ಕಾಂಗ್ರೆಸ್ ಸದಸ್ಯೆ ವಹೀದಾ ನೋಡನೋಡುತ್ತಿದ್ದಂತೆ ಪುರಸಭೆ ಹೊರಗೆ ನಿಂತಿದ್ದ ಕಾಂಗ್ರೆಸ್ ಮುಖಂಡರ ಗುಂಪಿನ ಕಡೆಗೆ ಓಡಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಆಕೆಗೆ ಭದ್ರತೆ ನೀಡಿ ಕಚೇರಿಯೊಳಗೆ ಕರೆದೊಯ್ದರು.<br /> ಶಾಸಕರು, ಬಿಜೆಪಿ ಸದಸ್ಯ, ಪಕ್ಷೇತರ ಸದಸ್ಯರ ಮತದೊಂದಿಗೆ ಒಬ್ಬ ಕಾಂಗ್ರೆಸ್ ಸದಸ್ಯೆಯನ್ನು ಮನವೊಲಿಸಿದ್ದ ಜೆಡಿಎಸ್, ಹದಿನೈದು ಮತ ಪಡೆದು ಅಧ್ಯಕ್ಷ ಸ್ಥಾನ ಏರಲು ಪ್ರಯತ್ನಿಸಿತ್ತು. ಆದರೆ ಜೆಡಿಎಸ್ ಕಡೆಗೆ ವಾಲಿದ್ದ ಅಧ್ಯಕ್ಷ ಗಾದಿ, ಸ್ವಲ್ಪದರಲ್ಲೇ ಕಾಂಗ್ರೆಸ್ ಪಾಲಾಯಿತು.<br /> <br /> ಪುರಸಭೆ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೊರಗಡೆಯಿಂದ ಕಾಂಗ್ರೆಸ್ ಮುಖಂಡ ತೋಪಡಾ ನಾಗರಾಜ್ ಅವರು ಪಕ್ಷೇತರ ಅಭ್ಯರ್ಥಿ ಕಿಶನ್ ಜೆಡಿಎಸ್ ಬೆಂಬಲಿಸಿದ್ದಕ್ಕೆ ಅವಾಚ್ಯ ಶಬ್ದದಿಂದ ನಿಂದಿಸಿದರು ಎಂಬ ಕಾರಣಕ್ಕೆ ಜೆಡಿಎಸ್ ಸದಸ್ಯರು ಕೂಗಾಡಿದ ಘಟನೆ ನಡೆಯಿತು.<br /> <br /> ನಾಗರಾಜ್ ಅವರನ್ನು ಬಂಧಿಸಬೇಕು ಎಂದು ಜೆಡಿಎಸ್ ಸದಸ್ಯರು ಪೊಲೀಸರನ್ನು ಒತ್ತಾಯಿಸಿದರು. ಆಗ ಮಧ್ಯ ಪ್ರವೇಶಿಸಿದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಚುನಾವಣೆ ನಡೆಯುವ ವೇಳೆ ಕಚೇರಿ ಬಳಿ ಬಂದು ಈ ರೀತಿ ಕೆಟ್ಟದಾಗಿ ಮಾತನಾಡುವುದು, ನಡೆದುಕೊಳ್ಳುವುದು ತಪ್ಪು ಎಂದು ಹೇಳಿದರು. ಕೋಪಗೊಂಡಿದ್ದ ಜೆಡಿಎಸ್ ಸದಸ್ಯರನ್ನು ಸಮಾಧಾನಗೊಳಿಸಿದರು.<br /> <br /> ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮುಷ್ಠರಿ ತನ್ವೀರ್ ಹಾಗೂ ಜೆಡಿಎಸ್ನ ಪ್ರಭಾವತಿ ಸುರೇಶ್ ಪೈಪೋಟಿ ನಡೆಸಿದ್ದರು. ಮುಷ್ಠರಿ ತನ್ವೀರ್ 15 ಮತ ಪಡೆದು, ಜೆಡಿಎಸ್ನ ಪ್ರಭಾವತಿ ಸುರೇಶ್ ಅವರನ್ನು 1 ಮತದ ಅಂತರದಿಂದ ಪರಾಭವಗೊಳಿಸಿದರು.<br /> <br /> ಚುನಾವಣೆ ಅಧಿಕಾರಿಯಾಗಿದ್ದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ. ಶಾಸಕ ಎಂ.ರಾಜಣ್ಣ, ಪುರಸಭೆ ಮುಖ್ಯಾಧಿಕಾರಿ ರಾಮ್ಪ್ರಕಾಶ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಶಿರಸ್ತೇದಾರ್ ಪ್ರಕಾಶ್ ಹಾಜರಿದ್ದರು.<br /> <br /> <strong>‘ಗಲತ್ ಕರ್ನಕ್ಕೋ, ಗಲತ್ ಕರ್ನಕ್ಕೋ’</strong></p>.<p><strong>ಶಿಡ್ಲಘಟ್ಟ:</strong> ಪಟ್ಟಣದ ಪುರಸಭೆ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವುದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯೆ ವಹೀದಾ ಅವರಿಗೆ ಕೆಲವರು ‘ಗಲತ್ ಕರ್ನಕ್ಕೋ, ಗಲತ್ ಕರ್ನಕ್ಕೋ’ ಎಂದು ಬುದ್ಧಿ ಮಾತು ಹೇಳಿದ ಘಟನೆ ಸೋಮವಾರ ನಡೆಯಿತು.<br /> <br /> ಕಾಂಗ್ರೆಸ್ನಿಂದ ಪ್ರತ್ಯೇಕಗೊಂಡ ವಹೀದಾ ಅವರು ಶಾಸಕ ಎಂ.ರಾಜಣ್ಣ ನೇತೃತ್ವದ ಜೆಡಿಎಸ್ ಸದಸ್ಯರಿದ್ದ ವಾಹನದಿಂದ ಕೆಳಗಿಳಿದರು. ಮರುಕ್ಷಣವೇ ಜೆಡಿಎಸ್ ತಂಡದಿಂದ ದೂರಗೊಂಡು ಕಾಂಗ್ರೆಸ್ ಮುಖಂಡರ ಗುಂಪಿನತ್ತ ಓಡಿದರು. ಅನಿರೀಕ್ಷಿತ ಬೆಳವಣಿಗೆಯಿಂದ ಆಘಾತಕ್ಕೆ ಒಳಗಾದ ಜೆಡಿಎಸ್ ಸದಸ್ಯರು ಆಕೆಯನ್ನು ಮತ್ತೊಮ್ಮೆ ತಂಡದಲ್ಲಿ ಸೇರಿಸಿಕೊಳ್ಳಲು ಯತ್ನಿಸಿದರು. ಆ ಸಮಯದಲ್ಲೇ ಕೆಲವರು ‘ಗಲತ್ ಕರ್ನಕ್ಕೋ, ಗಲತ್ ಕರುನಕ್ಕೋ’ ಎಂದು ಸೂಕ್ಷ್ಮವಾಗಿ ಹೇಳಿದರು. ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಕಾನ್ಸ್ಟೆಬಲ್ ಮಧ್ಯೆಪ್ರವೇಶಿಸಿದರು. ವಹೀದಾ ಅವರನ್ನು ಸುರಕ್ಷಿತವಾಗಿ ಪುರಸಭೆಯೊಳಗೆ ಕರೆದೊಯ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>