ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕ, ನಾಯಕಿಯ ಒಪ್ಪಿಸಿದ ಕಷ್ಟ

ಪಂಚರಂಗಿ
Last Updated 19 ಜೂನ್ 2015, 19:30 IST
ಅಕ್ಷರ ಗಾತ್ರ

‘ಇಮ್ರಾನ್‌ ಖಾನ್‌ ಹಾಗೂ ಕಂಗನಾ ರನೋಟ್‌ ಇಬ್ಬರನ್ನೂ ನನ್ನ ಚಿತ್ರದಲ್ಲಿ ನಟಿಸುವಂತೆ ಒಪ್ಪಿಸಲು ಬಹಳ ಕಷ್ಟಪಟ್ಟಿದ್ದೇನೆ. ಇವರಿಬ್ಬರೂ ನನ್ನ ಚಿತ್ರದಲ್ಲಿ ನಟಿಸುವುದು ನನ್ನ ಕನಸಾಗಿತ್ತು’ ಎಂದು ನಿರ್ದೇಶಕ ನಿಖಿಲ್‌ ಅಡ್ವಾನಿ ಹೇಳಿದ್ದಾರೆ.

‘ನನ್ನ ಚಿತ್ರದ ಮ್ಯಾಡಿ ಪಾತ್ರವನ್ನು ನಿರ್ವಹಿಸುವ ಸಾಮರ್ಥ್ಯ ಇರುವುದು ಇಮ್ರಾನ್‌ ಅವರಿಗೆ ಮಾತ್ರ. ಹಾಗಾಗಿ ಈ ಪಾತ್ರಕ್ಕೆ ನನಗೆ ಮೊದಲು ನೆನಪಾಗಿದ್ದು ಅವರೇ.  ಅವರನ್ನು ಬಿಟ್ಟು ಬೇರೆಯವರು ಆ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ’ ಎಂದು ನಿರ್ದೇಶಕ  ನಿಖಿಲ್‌ ‘ಕಟ್ಟಿ ಬಟ್ಟಿ’ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಿ ಮಾತನಾಡಿದರು.

‘ನಗರ ಪ್ರದೇಶದಲ್ಲಿ ಎರಡು ವಿಭಿನ್ನ ಮನಸ್ಸುಳ್ಳವರ ಕಥೆಯೇ ‘ಕಟ್ಟಿ ಬಟ್ಟಿ’. ಯಾವುದೋ ಒಂದು ಸನ್ನಿವೇಶದಿಂದ ಅವರಿಬ್ಬರ ಮಧ್ಯೆ ಬಿರುಕು ಮೂಡುತ್ತದೆ. ಇದೇ ಎಳೆಯನ್ನಿಟ್ಟುಕೊಂಡು ಚಿತ್ರ ಮಾಡಲಾಗಿದೆ’ ಎಂದು ನಿಖಿಲ್‌ ತಮ್ಮ ಚಿತ್ರಕಥೆಯ ಬಗ್ಗೆ ಹೇಳಿಕೊಂಡರು.

‘ಮೊದಲು ಇಮ್ರಾನ್‌ ಸ್ಕ್ರಿಪ್ಟ್ ಓದಿ ಚಿತ್ರದಲ್ಲಿ ನಟಿಸುವುದಿಲ್ಲ ಎಂದಿದ್ದರು.  ಅವರಿಗೆ ಕರೆ ಮಾಡಿ  ದಯವಿಟ್ಟು ನನಗೆ ಕಥೆ ಹೇಳುವ ಅವಕಾಶ ಕೊಡಿ ಎಂದು ಕೇಳಿಕೊಂಡೆ. ನಂತರ ಅವರ ಮನೆಗೆ ಹೋಗಿ ಕಥೆಯನ್ನು ವಿವರಿಸಿದೆ. ಆಗ ಇಮ್ರಾನ್‌ಗೆ ನಮ್ಮ ಕಥೆ ವಿಭಿನ್ನವೆನ್ನಿಸಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಅವರನ್ನು ಒಪ್ಪಿಸುವುದು ಸ್ವಲ್ಪ ಕಷ್ಟವೇ ಆಯಿತು’ ಎಂದಿದ್ದಾರೆ ನಿರ್ದೇಶಕ.

‘ನಟಿ ಕಂಗನಾ ರನೋಟ್‌ ಅವರಿಗೆ ಕೂಡ ಸುಮಾರು ಎರಡು ಗಂಟೆಗಳ ಕಾಲ ಚಿತ್ರಕಥೆಯನ್ನು ನಿರೂಪಿಸಿದ್ದೆ. ನಂತರ ಅವರೂ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಅವರಿಗೂ ನಾನು ಕೃತಜ್ಞತೆ ಹೇಳುತ್ತೇನೆ’ ಎಂದು ನಿಖಿಲ್‌ ಖುಷಿಯಿಂದ ಹೇಳಿಕೊಂಡಿದ್ದಾರೆ.

ಯುಟಿವಿ ಮೋಷನ್‌ ಪಿಕ್ಚರ್‌ ಹಾಗೂ ಎಮ್ಮಾಯ್‌ (Emmay) ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಸಿದ್ದಾರ್ಥ್‌ ರಾಯ್‌ ಹಾಗೂ ನಿಖಿಲ್‌ ‘ಕಟ್ಟಿ ಬಟ್ಟಿ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸೆಪ್ಟೆಂಬರ್‌ 18ರಂದು ಈ ಚಿತ್ರ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT