<p><strong>ಮೈಸೂರು:</strong> ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ `ಭೂ ಚೇತನ~ವನ್ನು ಈ ಬಾರಿ ರಾಜ್ಯದ 30 ಜಿಲ್ಲೆಗಳಲ್ಲೂ ಆರಂಭಿಸುವ ಜೊತೆಗೆ ನೀರಾವರಿ ಪ್ರದೇಶವನ್ನೂ `ಭೂ ಚೇತನ~ ವ್ಯಾಪ್ತಿಗೆ ಒಳಪಡಿಸಲಾಗಿದೆ.<br /> <br /> ಖುಷ್ಕಿ ಪ್ರದೇಶದ ಬೆಳೆ ಇಳುವರಿ ಹೆಚ್ಚಿಸುವುದರೊಂದಿಗೆ ರೈತರ ಜೀವನ ಹಾಗೂ ಆರ್ಥಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ 2009ರಲ್ಲಿ ಮೊದಲ ಬಾರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಬಾರಿ ಖುಷ್ಕಿ ಪ್ರದೇಶದೊಂದಿಗೆ ನೀರಾವರಿ ಜಮೀನಿಗೂ ಯೋಜನೆಯನ್ನು ವಿಸ್ತರಿಸಿರುವುದು ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿಸಿದೆ.<br /> <br /> ಜಿಲ್ಲೆಯಲ್ಲಿ 2.53 ಲಕ್ಷ ಹೆಕ್ಟೇರ್ ಪ್ರದೇಶವನ್ನು `ಭೂ ಚೇತನ~ ಯೋಜನೆಯಡಿ ಗುರುತಿಸಲಾಗಿದ್ದು, ಈ ಪೈಕಿ 1.95 ಲಕ್ಷ ಹೆಕ್ಟೇರ್ ಖುಷ್ಕಿ ಪ್ರದೇಶ ಹಾಗೂ 55 ಸಾವಿರ ಹೆಕ್ಟೇರ್ ಭತ್ತ (ನೀರಾವರಿ) ಹಾಗೂ 3 ಸಾವಿರ ಹೆಕ್ಟೇರ್ ಕಬ್ಬು (ನೀರಾವರಿ) ಬೆಳೆಯುವ ಪ್ರದೇಶವನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಯೋಜನೆಯನ್ನು ಪರಿಣಾಮಕಾರಿ ಯಾಗಿ ಜಾರಿಗೆ ತರಲು `ರೈತ ಅನುವುಗಾರ~ ಹಾಗೂ `ಮುಂದಾಳು ರೈತ~ರನ್ನು ನೇಮಕ ಮಾಡಲಾಗಿದೆ.<br /> <br /> ಪ್ರತಿ 500 ಹೆಕ್ಟೇರ್ ಭೂಮಿಗೆ ಒಬ್ಬ ರೈತ ಅನುವುಗಾರರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಎಂಟು ದಿನಗಳ ತರಬೇತಿ ನೀಡಲಾಗಿದೆ. ಅನುವುಗಾರ ಸ್ಥಳೀಯ ರೈತರಾಗಿರಬೇಕು, ಗುಂಪು ರಚನಾ ಸಾಮರ್ಥ್ಯವಿದ್ದು, ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರಬೇಕು ಎಂಬ ಮಾನದಂಡ ಅನುಸರಿಸಲಾಗಿದೆ. <br /> <br /> ಪ್ರತಿ ರೈತ ಅನುವುಗಾರನಿಗೆ 5 ಮಂದಿ ಮುಂದಾಳು ರೈತರನ್ನು ಕೊಡಲಾಗಿದೆ. ಅನುವುಗಾರರಿಗೆ ಪ್ರತಿ ದಿನ 150 ರೂಪಾಯಿ ಹಾಗೂ ರೈತ ಮುಂದಾಳುವಿಗೆ 95 ರೂಪಾಯಿ ಗೌರವ ಧನ ನೀಡಲಾಗುತ್ತಿದೆ.<br /> <br /> ಜಿಲ್ಲೆಯ 7 ತಾಲ್ಲೂಕುಗಳಲ್ಲಿ 390 ರೈತ ಅನುವುಗಾರರು ಹಾಗೂ 1,950 ರೈತ ಮುಂದಾಳುಗಳನ್ನು ನೇಮಕ ಮಾಡಲಾಗಿದೆ. 33 ಕ್ಷೇತ್ರ ಪಾಠಶಾಲೆಗಳನ್ನು ಆರಂಭಿಸಲಾ ಗಿದ್ದು, 2,400 ಗೋಡೆ ಬರಹದ ಮೂಲಕ `ಭೂ ಚೇತನ~ ಯೋಜನೆ ಬಗ್ಗೆ ಪ್ರಚಾರ ಕೈಗೊಳ್ಳಲಾಗಿದೆ. <br /> <br /> ರೈತರಿಗೆ ಕೃಷಿ ಪರಿಕರ, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಲು 360 ಗೋದಾಮು ಬಾಡಿಗೆ ಹಿಡಿಯಲಾಗಿದ್ದು, 33 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ.<br /> <br /> ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು 19,500 ಟನ್ ಜಿಪ್ಸಂ, 975 ಟನ್ ಸತುವಿನ ಸಲ್ಫೇಟ್ ಹಾಗೂ 390 ಟನ್ ಬೋರಾನ್ ಸೇರಿದಂತೆ ಅಗತ್ಯ ಪೋಷಕಾಂಶಗಳ ವಿತರಣೆಗೆ ಕೃಷಿ ಇಲಾಖೆ ಮುಂದಾಗಿದ್ದು, ಶೇ 50ರ ರಿಯಾಯಿತಿಯಲ್ಲಿ ದರದಲ್ಲಿ ರೈತರಿಗೆ ನೀಡುತ್ತಿರುವುದು ವಿಶೇಷವಾಗಿದೆ.<br /> <br /> ಈ ಕುರಿತು `ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ, `ಭೂ ಚೇತನ ಉತ್ತಮ ಯೋಜನೆಯಾಗಿದ್ದು ಇದೇ ಮೊದಲ ಬಾರಿಗೆ ನೀರಾವರಿ ಜಮೀನಿಗೂ ವಿಸ್ತರಿಸಲಾಗಿದೆ. <br /> <br /> ಕಳೆದ ವರ್ಷ ಈ ಯೋಜನೆಯಿಂದ ಶೇ 20 ರಿಂದ 25ರಷ್ಟು ಹೆಚ್ಚುವರಿ ಇಳುವರಿ ಪಡೆಯಲಾಗಿದೆ. ಕ್ಷೇತ್ರ ಕೃಷಿ ಪಾಠಶಾಲೆ ಮೂಲಕ ವಾರಕ್ಕೊಂದು ಬಾರಿ ರೈತರಿಗೆ ಕೃಷಿ ಜಮೀನಿನಲ್ಲೇ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ರೋಗ ನಿರ್ವಹಣೆ, ಕೀಟಬಾಧೆ, ಬೆಳೆ ಹತೋಟಿ ಸೇರಿದಂತೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ~ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ `ಭೂ ಚೇತನ~ವನ್ನು ಈ ಬಾರಿ ರಾಜ್ಯದ 30 ಜಿಲ್ಲೆಗಳಲ್ಲೂ ಆರಂಭಿಸುವ ಜೊತೆಗೆ ನೀರಾವರಿ ಪ್ರದೇಶವನ್ನೂ `ಭೂ ಚೇತನ~ ವ್ಯಾಪ್ತಿಗೆ ಒಳಪಡಿಸಲಾಗಿದೆ.<br /> <br /> ಖುಷ್ಕಿ ಪ್ರದೇಶದ ಬೆಳೆ ಇಳುವರಿ ಹೆಚ್ಚಿಸುವುದರೊಂದಿಗೆ ರೈತರ ಜೀವನ ಹಾಗೂ ಆರ್ಥಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ 2009ರಲ್ಲಿ ಮೊದಲ ಬಾರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಬಾರಿ ಖುಷ್ಕಿ ಪ್ರದೇಶದೊಂದಿಗೆ ನೀರಾವರಿ ಜಮೀನಿಗೂ ಯೋಜನೆಯನ್ನು ವಿಸ್ತರಿಸಿರುವುದು ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿಸಿದೆ.<br /> <br /> ಜಿಲ್ಲೆಯಲ್ಲಿ 2.53 ಲಕ್ಷ ಹೆಕ್ಟೇರ್ ಪ್ರದೇಶವನ್ನು `ಭೂ ಚೇತನ~ ಯೋಜನೆಯಡಿ ಗುರುತಿಸಲಾಗಿದ್ದು, ಈ ಪೈಕಿ 1.95 ಲಕ್ಷ ಹೆಕ್ಟೇರ್ ಖುಷ್ಕಿ ಪ್ರದೇಶ ಹಾಗೂ 55 ಸಾವಿರ ಹೆಕ್ಟೇರ್ ಭತ್ತ (ನೀರಾವರಿ) ಹಾಗೂ 3 ಸಾವಿರ ಹೆಕ್ಟೇರ್ ಕಬ್ಬು (ನೀರಾವರಿ) ಬೆಳೆಯುವ ಪ್ರದೇಶವನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಯೋಜನೆಯನ್ನು ಪರಿಣಾಮಕಾರಿ ಯಾಗಿ ಜಾರಿಗೆ ತರಲು `ರೈತ ಅನುವುಗಾರ~ ಹಾಗೂ `ಮುಂದಾಳು ರೈತ~ರನ್ನು ನೇಮಕ ಮಾಡಲಾಗಿದೆ.<br /> <br /> ಪ್ರತಿ 500 ಹೆಕ್ಟೇರ್ ಭೂಮಿಗೆ ಒಬ್ಬ ರೈತ ಅನುವುಗಾರರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಎಂಟು ದಿನಗಳ ತರಬೇತಿ ನೀಡಲಾಗಿದೆ. ಅನುವುಗಾರ ಸ್ಥಳೀಯ ರೈತರಾಗಿರಬೇಕು, ಗುಂಪು ರಚನಾ ಸಾಮರ್ಥ್ಯವಿದ್ದು, ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರಬೇಕು ಎಂಬ ಮಾನದಂಡ ಅನುಸರಿಸಲಾಗಿದೆ. <br /> <br /> ಪ್ರತಿ ರೈತ ಅನುವುಗಾರನಿಗೆ 5 ಮಂದಿ ಮುಂದಾಳು ರೈತರನ್ನು ಕೊಡಲಾಗಿದೆ. ಅನುವುಗಾರರಿಗೆ ಪ್ರತಿ ದಿನ 150 ರೂಪಾಯಿ ಹಾಗೂ ರೈತ ಮುಂದಾಳುವಿಗೆ 95 ರೂಪಾಯಿ ಗೌರವ ಧನ ನೀಡಲಾಗುತ್ತಿದೆ.<br /> <br /> ಜಿಲ್ಲೆಯ 7 ತಾಲ್ಲೂಕುಗಳಲ್ಲಿ 390 ರೈತ ಅನುವುಗಾರರು ಹಾಗೂ 1,950 ರೈತ ಮುಂದಾಳುಗಳನ್ನು ನೇಮಕ ಮಾಡಲಾಗಿದೆ. 33 ಕ್ಷೇತ್ರ ಪಾಠಶಾಲೆಗಳನ್ನು ಆರಂಭಿಸಲಾ ಗಿದ್ದು, 2,400 ಗೋಡೆ ಬರಹದ ಮೂಲಕ `ಭೂ ಚೇತನ~ ಯೋಜನೆ ಬಗ್ಗೆ ಪ್ರಚಾರ ಕೈಗೊಳ್ಳಲಾಗಿದೆ. <br /> <br /> ರೈತರಿಗೆ ಕೃಷಿ ಪರಿಕರ, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಲು 360 ಗೋದಾಮು ಬಾಡಿಗೆ ಹಿಡಿಯಲಾಗಿದ್ದು, 33 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ.<br /> <br /> ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು 19,500 ಟನ್ ಜಿಪ್ಸಂ, 975 ಟನ್ ಸತುವಿನ ಸಲ್ಫೇಟ್ ಹಾಗೂ 390 ಟನ್ ಬೋರಾನ್ ಸೇರಿದಂತೆ ಅಗತ್ಯ ಪೋಷಕಾಂಶಗಳ ವಿತರಣೆಗೆ ಕೃಷಿ ಇಲಾಖೆ ಮುಂದಾಗಿದ್ದು, ಶೇ 50ರ ರಿಯಾಯಿತಿಯಲ್ಲಿ ದರದಲ್ಲಿ ರೈತರಿಗೆ ನೀಡುತ್ತಿರುವುದು ವಿಶೇಷವಾಗಿದೆ.<br /> <br /> ಈ ಕುರಿತು `ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ, `ಭೂ ಚೇತನ ಉತ್ತಮ ಯೋಜನೆಯಾಗಿದ್ದು ಇದೇ ಮೊದಲ ಬಾರಿಗೆ ನೀರಾವರಿ ಜಮೀನಿಗೂ ವಿಸ್ತರಿಸಲಾಗಿದೆ. <br /> <br /> ಕಳೆದ ವರ್ಷ ಈ ಯೋಜನೆಯಿಂದ ಶೇ 20 ರಿಂದ 25ರಷ್ಟು ಹೆಚ್ಚುವರಿ ಇಳುವರಿ ಪಡೆಯಲಾಗಿದೆ. ಕ್ಷೇತ್ರ ಕೃಷಿ ಪಾಠಶಾಲೆ ಮೂಲಕ ವಾರಕ್ಕೊಂದು ಬಾರಿ ರೈತರಿಗೆ ಕೃಷಿ ಜಮೀನಿನಲ್ಲೇ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ರೋಗ ನಿರ್ವಹಣೆ, ಕೀಟಬಾಧೆ, ಬೆಳೆ ಹತೋಟಿ ಸೇರಿದಂತೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ~ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>