<p><strong>ಹೊನ್ನಾಳಿ: </strong>ಬೇಸಿಗೆಯ ತಾಪಮಾನದಿಂದ ಕೊಂಚ ರಕ್ಷಣೆ ಬೇಕಾದರೆ ಮನುಷ್ಯ ಹಣ್ಣುಗಳ ಮೊರೆ ಹೋಗುತ್ತಾನೆ. ಅದರಲ್ಲೂ ಕಲ್ಲಂಗಡಿ-ಕರಬೂಜ ಬೇಸಿಗೆಯಲ್ಲಿ ಮನುಷ್ಯನಿಗೆ ಹಿತಕರ ಅನುಭವ ನೀಡುತ್ತವೆ. <br /> ಹೊನ್ನಾಳಿಯ ಕಲ್ಲಂಗಡಿ-ಕರಬೂಜ ಇಡೀ ರಾಜ್ಯದಲ್ಲೇ ತನ್ನ ವಿಶಿಷ್ಟ ರುಚಿ ಮತ್ತು ಬಣ್ಣದಿಂದಾಗಿ ಪ್ರಸಿದ್ಧಿ ಪಡೆದಿವೆ. <br /> <br /> ಈ ಹಣ್ಣುಗಳನ್ನು ರೈತರು ತುಂಗಭದ್ರಾ ನದಿಯ ದಂಡೆಯಲ್ಲಿ ಬೆಳೆಯುತ್ತಾರೆ. ಮೊದಲೆಲ್ಲಾ ರೈತರು ಸಾವಯವ ಪದ್ಧತಿಯಲ್ಲಿ ಹಣ್ಣು ಬೆಳೆಯುತ್ತಿದ್ದರು. ಆದರೆ, ಇದೀಗ ಬದಲಾದ ಕಾಲಮಾನಕ್ಕೆ ತಕ್ಕಂತೆ ರೈತರು ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಗಳ ಮೊರೆ ಹೋಗಲೇಬೇಕಾಗಿದೆ. ಆದರೂ, ರುಚಿಕರ ಹಣ್ಣುಗಳ ಉತ್ತಮ ಇಳುವರಿ ದೊರೆಯುತ್ತದೆ.<br /> <br /> ರಾಜ್ಯ ಹೆದ್ದಾರಿ ಬಳಿ ಹೊನ್ನಾಳಿಯ ತುಂಗಭದ್ರಾ ನದಿ ಸಮೀಪ ರಾಶಿಗಟ್ಟಲೇ ಕರಬೂಜ ಹಣ್ಣು ಸುರಿದುಕೊಂಡು ರೈತರು ವ್ಯಾಪಾರ ಮಾಡುತ್ತಾರೆ. ಈ ದಾರಿಯಲ್ಲಿ ಕಾರು ಇತರೆ ವಾಹನಗಳಲ್ಲಿ ತೆರಳುವ ಜನರು ಹಣ್ಣುಗಳಿಂದ ಆಕರ್ಷಿತರಾಗಿ ಖರೀದಿಸಿಯೇ ಮುಂದೆ ಸಾಗುತ್ತಾರೆ. <br /> <br /> ಹೊನ್ನಾಳಿಯ ಕಲ್ಲಂಗಡಿ-ಕರಬೂಜ ಹಣ್ಣುಗಳಿಗೆ ಹೊರ ರಾಜ್ಯ, ಜಿಲ್ಲೆಗಳಲ್ಲಿಯೂ ಅಪಾರ ಬೇಡಿಕೆ ಇದೆ. ಸಗಟು ದರದಲ್ಲಿ ಇಲ್ಲಿಂದ ಹಣ್ಣುಗಳನ್ನು ಖರೀದಿಸಿ ವ್ಯಾಪಾರಿಗಳು ಅಧಿಕ ಲಾಭ ಗಳಿಸಿದ ಉದಾಹರಣೆಗಳೂ ಇಲ್ಲದಿಲ್ಲ. <br /> ದೇಹದಲ್ಲಿ ನಿರ್ಜಲೀಕರಣವಾದರೆ, ಅದರಿಂದ ಮುಕ್ತಿ ಹೊಂದಲು ವೈದ್ಯರು ಹಣ್ಣುಗಳ ಸೇವೆನೆಗೆ ಸಲಹೆ ನೀಡುತ್ತಾರೆ. ಅದರಲ್ಲೂ ಕಲ್ಲಂಗಡಿ-ಕರಬೂಜ ಹಣ್ಣುಗಳು ನಿರ್ಜಲೀಕರಣ ಸಮಸ್ಯೆಗೆ ರಾಮಬಾಣ.<br /> <br /> ಕಲ್ಲಂಗಡಿ-ಕರಬೂಜ ಹಣ್ಣುಗಳಲ್ಲಿ ಮ್ಯಾಗ್ನೀಷಿಯಂ, ಪೊಟ್ಯಾಷಿಯಂ, ಕ್ಯಾಲ್ಷಿಯಂ, ಪ್ರೋಟೀನ್ಗಳು ಹೇರಳ ಪ್ರಮಾಣದಲ್ಲಿ ಇರುವುದರಿಂದ ಮನುಷ್ಯನ ದೇಹಕ್ಕೆ ಬೇಸಿಗೆಯಲ್ಲಿ ಇವು ಅತ್ಯುಪಯುಕ್ತ ಎಂದು ಡಾ.ಎನ್.ಕೆ. ಲಿಂಗರಾಜ್ ಹೇಳುತ್ತಾರೆ. <br /> <br /> ಪ್ರಕೃತಿ ಮನುಷ್ಯನ ಆರೋಗ್ಯ ರಕ್ಷಣೆಗೆ ಕಾಲ ಕಾಲಕ್ಕೆ ಹಣ್ಣುಗಳು ಲಭ್ಯವಾಗುವ ವ್ಯವಸ್ಥೆ ಮಾಡಿದೆ. ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ನೀರಿನ ಅಂಶ ಹೆಚ್ಚಾಗಿರುವ ಕಲ್ಲಂಗಡಿ-ಕರಬೂಜ ದೊರೆಯುವ ವ್ಯವಸ್ಥೆ ಇದೆ. ಇದರಿಂದ ಮನುಷ್ಯನ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ: </strong>ಬೇಸಿಗೆಯ ತಾಪಮಾನದಿಂದ ಕೊಂಚ ರಕ್ಷಣೆ ಬೇಕಾದರೆ ಮನುಷ್ಯ ಹಣ್ಣುಗಳ ಮೊರೆ ಹೋಗುತ್ತಾನೆ. ಅದರಲ್ಲೂ ಕಲ್ಲಂಗಡಿ-ಕರಬೂಜ ಬೇಸಿಗೆಯಲ್ಲಿ ಮನುಷ್ಯನಿಗೆ ಹಿತಕರ ಅನುಭವ ನೀಡುತ್ತವೆ. <br /> ಹೊನ್ನಾಳಿಯ ಕಲ್ಲಂಗಡಿ-ಕರಬೂಜ ಇಡೀ ರಾಜ್ಯದಲ್ಲೇ ತನ್ನ ವಿಶಿಷ್ಟ ರುಚಿ ಮತ್ತು ಬಣ್ಣದಿಂದಾಗಿ ಪ್ರಸಿದ್ಧಿ ಪಡೆದಿವೆ. <br /> <br /> ಈ ಹಣ್ಣುಗಳನ್ನು ರೈತರು ತುಂಗಭದ್ರಾ ನದಿಯ ದಂಡೆಯಲ್ಲಿ ಬೆಳೆಯುತ್ತಾರೆ. ಮೊದಲೆಲ್ಲಾ ರೈತರು ಸಾವಯವ ಪದ್ಧತಿಯಲ್ಲಿ ಹಣ್ಣು ಬೆಳೆಯುತ್ತಿದ್ದರು. ಆದರೆ, ಇದೀಗ ಬದಲಾದ ಕಾಲಮಾನಕ್ಕೆ ತಕ್ಕಂತೆ ರೈತರು ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಗಳ ಮೊರೆ ಹೋಗಲೇಬೇಕಾಗಿದೆ. ಆದರೂ, ರುಚಿಕರ ಹಣ್ಣುಗಳ ಉತ್ತಮ ಇಳುವರಿ ದೊರೆಯುತ್ತದೆ.<br /> <br /> ರಾಜ್ಯ ಹೆದ್ದಾರಿ ಬಳಿ ಹೊನ್ನಾಳಿಯ ತುಂಗಭದ್ರಾ ನದಿ ಸಮೀಪ ರಾಶಿಗಟ್ಟಲೇ ಕರಬೂಜ ಹಣ್ಣು ಸುರಿದುಕೊಂಡು ರೈತರು ವ್ಯಾಪಾರ ಮಾಡುತ್ತಾರೆ. ಈ ದಾರಿಯಲ್ಲಿ ಕಾರು ಇತರೆ ವಾಹನಗಳಲ್ಲಿ ತೆರಳುವ ಜನರು ಹಣ್ಣುಗಳಿಂದ ಆಕರ್ಷಿತರಾಗಿ ಖರೀದಿಸಿಯೇ ಮುಂದೆ ಸಾಗುತ್ತಾರೆ. <br /> <br /> ಹೊನ್ನಾಳಿಯ ಕಲ್ಲಂಗಡಿ-ಕರಬೂಜ ಹಣ್ಣುಗಳಿಗೆ ಹೊರ ರಾಜ್ಯ, ಜಿಲ್ಲೆಗಳಲ್ಲಿಯೂ ಅಪಾರ ಬೇಡಿಕೆ ಇದೆ. ಸಗಟು ದರದಲ್ಲಿ ಇಲ್ಲಿಂದ ಹಣ್ಣುಗಳನ್ನು ಖರೀದಿಸಿ ವ್ಯಾಪಾರಿಗಳು ಅಧಿಕ ಲಾಭ ಗಳಿಸಿದ ಉದಾಹರಣೆಗಳೂ ಇಲ್ಲದಿಲ್ಲ. <br /> ದೇಹದಲ್ಲಿ ನಿರ್ಜಲೀಕರಣವಾದರೆ, ಅದರಿಂದ ಮುಕ್ತಿ ಹೊಂದಲು ವೈದ್ಯರು ಹಣ್ಣುಗಳ ಸೇವೆನೆಗೆ ಸಲಹೆ ನೀಡುತ್ತಾರೆ. ಅದರಲ್ಲೂ ಕಲ್ಲಂಗಡಿ-ಕರಬೂಜ ಹಣ್ಣುಗಳು ನಿರ್ಜಲೀಕರಣ ಸಮಸ್ಯೆಗೆ ರಾಮಬಾಣ.<br /> <br /> ಕಲ್ಲಂಗಡಿ-ಕರಬೂಜ ಹಣ್ಣುಗಳಲ್ಲಿ ಮ್ಯಾಗ್ನೀಷಿಯಂ, ಪೊಟ್ಯಾಷಿಯಂ, ಕ್ಯಾಲ್ಷಿಯಂ, ಪ್ರೋಟೀನ್ಗಳು ಹೇರಳ ಪ್ರಮಾಣದಲ್ಲಿ ಇರುವುದರಿಂದ ಮನುಷ್ಯನ ದೇಹಕ್ಕೆ ಬೇಸಿಗೆಯಲ್ಲಿ ಇವು ಅತ್ಯುಪಯುಕ್ತ ಎಂದು ಡಾ.ಎನ್.ಕೆ. ಲಿಂಗರಾಜ್ ಹೇಳುತ್ತಾರೆ. <br /> <br /> ಪ್ರಕೃತಿ ಮನುಷ್ಯನ ಆರೋಗ್ಯ ರಕ್ಷಣೆಗೆ ಕಾಲ ಕಾಲಕ್ಕೆ ಹಣ್ಣುಗಳು ಲಭ್ಯವಾಗುವ ವ್ಯವಸ್ಥೆ ಮಾಡಿದೆ. ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ನೀರಿನ ಅಂಶ ಹೆಚ್ಚಾಗಿರುವ ಕಲ್ಲಂಗಡಿ-ಕರಬೂಜ ದೊರೆಯುವ ವ್ಯವಸ್ಥೆ ಇದೆ. ಇದರಿಂದ ಮನುಷ್ಯನ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>