<p><strong>ಬಸವಕಲ್ಯಾಣ</strong>: ಶಿಕ್ಷಣ ಪಡೆದರೆ ಮಾತ್ರ ಪ್ರತಿಯೊಬ್ಬರಲ್ಲಿ ಅರಿವಿನ ಜ್ಯೋತಿ ಪ್ರಜ್ವಲಿಸುತ್ತದೆ ಎಂದು ತಹಸೀಲ್ದಾರ ಶಿವರಾಜ ಹಲಬರ್ಗೆ ಹೇಳಿದರು.<br /> <br /> ಇಲ್ಲಿನ ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಮತ್ತು ಕಾನೂನು ಅರಿವು -ನೆರವು ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.<br /> ನೆಹರು ಉತ್ತಮ ಶಿಕ್ಷಣ ಪಡೆದು ಪಂಡಿತರೆನಿಸಿಕೊಂಡಿದ್ದರು. ದೇಶಕ್ಕೆ ಉತ್ತಮ ಆಡಳಿತ ಕೊಟ್ಟರು ಎಂದು ಹೇಳಿದರು.<br /> <br /> ಹಿರಿಯಶ್ರೇಣಿ ನ್ಯಾಯಾಧೀಶರಾದ ಎಂ.ಎಸ್. ಹಿರೇಮಠ ಮಾತನಾಡಿ ಶಿಕ್ಷಕರು ಕಾನೂನಿನ ಬಗ್ಗೆ ಅರಿತುಕೊಂಡು ಮಕ್ಕಳಿಗೆ ತಿಳಿಹೇಳಬೇಕು ಎಂದರು.<br /> <br /> ನಾಯಾಧೀಶರಾದ ಎಂ.ಆರ್.ಒಡೆಯರ್ ಮಾತನಾಡಿ ಇಂದಿನ ಸ್ಪರ್ಧಾಯುಗದಲ್ಲಿ ಮಕ್ಕಳು ಹಿಂದಿನವರಂತೆ ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು. ಮಾತೃಭಾಷೆಗೆ ಗೌರವ ಕೊಡುವುದರ ಜತೆಗೆ ಇಗ್ಲಿಷ್ನಲ್ಲಿ ಜ್ಞಾನ ಸಂಪಾದಿಸಬೇಕು. ಕೆಎಎಸ್ ಮತ್ತು ಐಎಎಸ್ ಪಾಸಾಗಿ ದೊಡ್ಡ ಅಧಿಕಾರಿಯಾಗುವ ಕನಸು ಕಾಣಬೇಕು ಎಂದರು.</p>.<p>ನ್ಯಾಯವಾದಿ ಪಂಡಿತ ನಾಗರಾಳೆ ಮಾತನಾಡಿ ಜನನ ಮತ್ತು ಮರಣ ನೋಂದಣಿ ಕಾಯ್ದೆ ಮತ್ತು ಅದರ ಅವಶ್ಯಕತೆ ಬಗ್ಗೆ ಹೇಳಿದರು. ಗೋವಿಂದರೆಡ್ಡಿಯವರು ಶಿಕ್ಷಣ ಕಾಯ್ದೆ ಕುರಿತು ಮಾತನಾಡಿದರು.<br /> ವಕೀಲರ ಸಂಘದ ಅಧ್ಯಕ್ಷ ಶಿವರಾಜ ಮೇತ್ರೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ ಸ್ವಾಮಿ ನಾರಾಯಣಪುರ, ನಂದಕುಮಾರಿ, ಸುಕನ್ಯಾ, ಸತೀಶ ಮಾಶಾಳಕರ್, ಬಸವಂತರಾವ ವಿಭೂತಿ ಉಪಸ್ಥಿತರಿದ್ದರು.<br /> <br /> ಶಿವರಾಜ ಖೇಲೆ ನಿರೂಪಿಸಿದರು. ಮುಖ್ಯ ಶಿಕ್ಷಕ ಮಾಣಿಕರಾವ ಗೋರಮುಡೆ ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ಶಿಕ್ಷಣ ಪಡೆದರೆ ಮಾತ್ರ ಪ್ರತಿಯೊಬ್ಬರಲ್ಲಿ ಅರಿವಿನ ಜ್ಯೋತಿ ಪ್ರಜ್ವಲಿಸುತ್ತದೆ ಎಂದು ತಹಸೀಲ್ದಾರ ಶಿವರಾಜ ಹಲಬರ್ಗೆ ಹೇಳಿದರು.<br /> <br /> ಇಲ್ಲಿನ ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಮತ್ತು ಕಾನೂನು ಅರಿವು -ನೆರವು ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.<br /> ನೆಹರು ಉತ್ತಮ ಶಿಕ್ಷಣ ಪಡೆದು ಪಂಡಿತರೆನಿಸಿಕೊಂಡಿದ್ದರು. ದೇಶಕ್ಕೆ ಉತ್ತಮ ಆಡಳಿತ ಕೊಟ್ಟರು ಎಂದು ಹೇಳಿದರು.<br /> <br /> ಹಿರಿಯಶ್ರೇಣಿ ನ್ಯಾಯಾಧೀಶರಾದ ಎಂ.ಎಸ್. ಹಿರೇಮಠ ಮಾತನಾಡಿ ಶಿಕ್ಷಕರು ಕಾನೂನಿನ ಬಗ್ಗೆ ಅರಿತುಕೊಂಡು ಮಕ್ಕಳಿಗೆ ತಿಳಿಹೇಳಬೇಕು ಎಂದರು.<br /> <br /> ನಾಯಾಧೀಶರಾದ ಎಂ.ಆರ್.ಒಡೆಯರ್ ಮಾತನಾಡಿ ಇಂದಿನ ಸ್ಪರ್ಧಾಯುಗದಲ್ಲಿ ಮಕ್ಕಳು ಹಿಂದಿನವರಂತೆ ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು. ಮಾತೃಭಾಷೆಗೆ ಗೌರವ ಕೊಡುವುದರ ಜತೆಗೆ ಇಗ್ಲಿಷ್ನಲ್ಲಿ ಜ್ಞಾನ ಸಂಪಾದಿಸಬೇಕು. ಕೆಎಎಸ್ ಮತ್ತು ಐಎಎಸ್ ಪಾಸಾಗಿ ದೊಡ್ಡ ಅಧಿಕಾರಿಯಾಗುವ ಕನಸು ಕಾಣಬೇಕು ಎಂದರು.</p>.<p>ನ್ಯಾಯವಾದಿ ಪಂಡಿತ ನಾಗರಾಳೆ ಮಾತನಾಡಿ ಜನನ ಮತ್ತು ಮರಣ ನೋಂದಣಿ ಕಾಯ್ದೆ ಮತ್ತು ಅದರ ಅವಶ್ಯಕತೆ ಬಗ್ಗೆ ಹೇಳಿದರು. ಗೋವಿಂದರೆಡ್ಡಿಯವರು ಶಿಕ್ಷಣ ಕಾಯ್ದೆ ಕುರಿತು ಮಾತನಾಡಿದರು.<br /> ವಕೀಲರ ಸಂಘದ ಅಧ್ಯಕ್ಷ ಶಿವರಾಜ ಮೇತ್ರೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ ಸ್ವಾಮಿ ನಾರಾಯಣಪುರ, ನಂದಕುಮಾರಿ, ಸುಕನ್ಯಾ, ಸತೀಶ ಮಾಶಾಳಕರ್, ಬಸವಂತರಾವ ವಿಭೂತಿ ಉಪಸ್ಥಿತರಿದ್ದರು.<br /> <br /> ಶಿವರಾಜ ಖೇಲೆ ನಿರೂಪಿಸಿದರು. ಮುಖ್ಯ ಶಿಕ್ಷಕ ಮಾಣಿಕರಾವ ಗೋರಮುಡೆ ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>