ಈ ಕಾರ್ಯಾಚರಣೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಕುರೇರಾ, ಉಪವಿಭಾಗಾಧಿಕಾರಿ ವೆಂಕಟೇಶ, ಎಸಿಎಫ್ ಪೂವಯ್ಯ, ಪಿಎಸ್ಐ ಉಮೇಶ್ ನೇತೃತ್ವದಲ್ಲಿ ನಡೆದಿತ್ತು.ತಾಲೂಕಿನ ಬನ್ನಿಹಟ್ಟಿ ಅದಿರು ತಪಾಸಣೆ ಠಾಣೆಯನ್ನು ತಪ್ಪಿಸಿಕೊಂಡು ಲಿಂಗದಹಳ್ಳಿ, ಮೆಟ್ರಿಕ್ಕಿ ಮಾರ್ಗವಾಗಿ ರಾಜಾಪುರ, ಗಂಗಲಾಪುರ, ದಿಬ್ಬಲದಿನ್ನಿ ಮೂಲಕ ಆಂಧ್ರಕ್ಕೆ ಅಕ್ರಮ ಲಾರಿಗಳು ಓಡಾಡುತ್ತಿವೆ ಎಂದು ಆರೋಪಿಸಲಾಗಿತ್ತು.