ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ, ಒಂಟೆ ಸಾಗಾಟ: ಪ್ರಕರಣ ದಾಖಲು

Last Updated 2 ಜನವರಿ 2014, 20:21 IST
ಅಕ್ಷರ ಗಾತ್ರ

ಬೆಂಗಳೂರು: ಗೃಹಪ್ರವೇಶಕ್ಕಾಗಿ ಒಂಟೆ ಮತ್ತು ಆನೆಯನ್ನು ಅಕ್ರಮವಾಗಿ ಸಾಗಾಟ ಮಾಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ಮಾವುತ ಇಸ್ಮಾಯಿಲ್‌ ಮತ್ತು ಆತನ ಸಹಾಯಕ ಅಶೋಕ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಹೈದರಾಬಾದ್‌­ನಿಂದ ಒಂಟೆಯನ್ನು ಮತ್ತು ಚಿತ್ರ­ದುರ್ಗದ ತರಳ­ಬಾಳು ಮಠದಿಂದ ಆನೆ­ಯನ್ನು ನಗರಕ್ಕೆ ಕರೆತಂದು ದೇವನ­ಹಳ್ಳಿಯ ಸ್ಟೋನ್‌ಹಿಲ್‌ ಶಾಲೆಯ ಬಳಿ ಕಟ್ಟಲಾಗಿತ್ತು ಎಂದು ಸಿಐಡಿ ಅಧಿಕಾರಿ­ಗಳು ತಿಳಿಸಿದ್ದಾರೆ.

ದೇವನಹಳ್ಳಿಯಲ್ಲಿರುವ ಎಂಬೆಸ್ಸಿ ಗ್ರೂಪ್‌ ಮಾಲೀಕ ಜಿತೇಂದ್ರ ನಿರ್ವಾಣಿ ಅವರ ಮನೆಯ ಗೃಹ ಪ್ರವೇಶಕ್ಕೆ ಒಂಟೆ, ಆನೆಯನ್ನು ತರಲಾಗಿತ್ತು ಎಂದು ಇಸ್ಮಾಯಿಲ್‌ ಮತ್ತು ಅಶೋಕ್‌ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT