ಸದ್ಯದ ವಿಧಾನಸಭಾ ಚುನಾವಣೆಯ ಜೋರು ಹಿಂದೆಂದಿಗಿಂತೂ ಹೆಚ್ಚಿದೆ. ಅದರಂತೆ ಹಣ, ಹೆಂಡ ಮತ್ತಿತರ ವಸ್ತುಗಳ ಹಂಚುವಿಕೆ ಸದ್ದಿಲ್ಲದೆ ನಡೆಯುತ್ತಿದೆ. ಇದನ್ನು ತಡೆಯಲು ಚುನಾವಣಾ ಆಯೋಗ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ.
ಇದರಿಂದ ಯಾವುದೇ ಹೆದರಿಕೆಯಿಲ್ಲದೆ ಬಿಂದಾಸಾಗಿ ಮತದಾರರನ್ನು ತಪ್ಪುದಾರಿಗೆ ಎಳೆಯುವುದು ತಪ್ಪುತ್ತದೆ. ಇಲ್ಲಿಯವರೆಗೆ ಹಲವಾರು ಅಭ್ಯರ್ಥಿಗಳ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ಇಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಏನಾದರೂ ಸುಧಾರಣೆ ಸಾಧ್ಯ.