ಬೆಂಗಳೂರಿನಲ್ಲಿ ಎ.ಟಿ.ಎಂ. ಘಟಕವೊಂದರಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿದ ಮಾತ್ರಕ್ಕೆ ಇಂತಹ ಪ್ರಕರಣ ತಡೆಯಲು ಸಾಧ್ಯವಿಲ್ಲ.
ಈ ಹಲ್ಲೆ ನಡೆದದ್ದು ಜನನಿಬಿಡ ಪ್ರದೇಶದ ಬೆಂಗಳೂರಿನ ಹೃದಯ ಭಾಗದಲ್ಲಿ. ಜ್ಯೋತಿ ಅವರು ಎಟಿಎಂ ಕೇಂದ್ರದ ಒಳಗೆ ಪ್ರವೇಶಿಸಿದಾಕ್ಷಣ ಹಲ್ಲೆ ನಡೆಸಿದವ ಒಳನುಗ್ಗಿ ಷಟರ್ ಎಳೆಯುತ್ತಾನೆ. ಏರಿಸಿದ ಷಟರ್ ಬೇರೆಯವರಿಗೆ ಇಳಿಸಲು ಬಾರದಂತೆ; ಕೆಳಗಡೆ ಯಾವ ರೀತಿ ಲಾಕ್ ಮಾಡುತ್ತಾರೋ ಮೇಲೆಯೂ ಅದೇ ರೀತಿ ಲಾಕ್ ಅಳವಡಿಸಬೇಕು.