ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಒಂದು ವರ್ಷ ಅಣ್ಣಿಗೇರಿಯಲ್ಲಿ ಮತ್ತೊಂದು ವರ್ಷ ಬನವಾಸಿಯಲ್ಲಿ ಮಾಡುವುದು ಸೂಕ್ತ ವಾಗಿದೆ. ಇದರಿಂದ ಕವಿಯ ಜನ್ಮಭೂಮಿಗೂ ಕರ್ಮಭೂಮಿಗೂ ಎರಡಕ್ಕೂ ಗೌರವ ಸಲ್ಲಿಸಿದಂತಾಗುತ್ತದೆ.
ಅಲ್ಲದೇ ಸಮಾರಂಭದ ಸಾಂಸ್ಕೃತಿಕ ಯಶಸ್ಸಿಗಾಗಿ ಎರಡೂ ಊರಿನ ಜನರಿಗೆ ಹಿತವಾದ ಸ್ಪರ್ಧೆಯ ಅವಕಾಶವನ್ನು ಒದಗಿಸಿದಂತಾಗುತ್ತದೆ. ಹೀಗಾಗಿ ಈ ವರ್ಷ ಅಣ್ಣಿಗೇರಿಯಲ್ಲಿ ನಡೆಸಲಿ. ಮುಂದಿನ ವರ್ಷ ಬನವಾಸಿಯಲ್ಲಿ ನಡೆಯುವಂತಾಗಲಿ.