ಅಂಕೋಲಾ: ಬೃಹತ್ ಯಂತ್ರ ಸಾಗಿಸುವ ವಾಹನ ಮುಂದೆ ಸಾಗಬೇಕಾದರೆ ತನಗೆ ಹಣ ಕೊಡಬೇಕು ಎಂದು ಪಟ್ಟು ಹಿಡಿದು ವಾಹನ ತಡೆದ ಬೇಲೆಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಹಾಸ ನಾರಾಯಣ ನಾಯಕ, ಇದನ್ನು ಪ್ರಶ್ನಿಸಿದ ಇಲ್ಲಿನ ಸಬ್ಇನ್ಸ್ಪೆಕ್ಟರ್ ಜಾಯ್ ಆಂಥೋಣಿ ಮತ್ತವರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.