ಬರಗೂರು ರಾಮಚಂದ್ರಪ್ಪ ಅವರ `ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ...~ (ಅ.2) ಬರಹ ನಮ್ಮ ದೇಶಕ್ಕೆ ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ಅವರುಗಳು ಹೇಗೆ ಪ್ರಸ್ತುತರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರವಾಗಿದೆ. ಅಂಬೇಡ್ಕರರ ಜಾತ್ಯತೀತ ರಾಷ್ಟ್ರ ಹಾಗೂ ಮಾರ್ಕ್ಸ್ನ ಆರ್ಥಿಕ ಸ್ವಾಯತ್ತ ಲೋಕದೊಂದಿಗೆ ಗಾಂಧಿಯವರ ಸ್ವರಾಜ್ಯ ಪರಿಕಲ್ಪನೆ ಹೊಂದಿರುವ ಸಂಬಂಧವನ್ನು ಬರಗೂರರು ಸರಳವಾಗಿ ವಿವರಿಸಿದ್ದಾರೆ. `ಮೋದಿ ಗುಜರಾತ್ನಲ್ಲಿ ಗಾಂಧಿ ಎಲ್ಲಿದ್ದಾರೆ!~ ಎನ್ನುವ ಉದ್ಘಾರ ನಮ್ಮನ್ನು ವರ್ತಮಾನದ ಪ್ರಖರತೆಗೆ ಮುಖಾಮುಖಿಯಾಗಿಸುತ್ತದೆ.