ಆದರೆ ದಿನಾಂಕ 1-10-12ರ ಮಧ್ಯರಾತ್ರಿಯಿಂದ ಯಾವುದೇ ಮುನ್ಸೂಚನೆ ನೀಡದೆ ದರ ಹೆಚ್ಚಳ ಮಾಡಿ ಸಚಿವರು ಮಾತಿಗೆ ತಪ್ಪಿ ನಡೆದಿದ್ದಾರೆ. ಬಸ್ ಟಿಕೆಟ್ ದರವನ್ನು 20% ರಷ್ಟು ಹೆಚ್ಚಳ ಮಾಡಿದ್ದಾರೆ. ಈ ಬಸ್ ಟಿಕೆಟ್ ದರ ಏರಿಕೆ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ.
ಆದ್ದರಿಂದ ಕೂಡಲೇ ಸಾರಿಗೆ ಸಚಿವರು ಬಸ್ ಟಿಕೆಟ್ ದರವನ್ನು ವಾಪಸ್ಸು ಪಡೆದು ಸಾಮಾನ್ಯ ಜನರು ಬರದಲ್ಲಿ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿ ಮನವಿ.