ಏರ್ ಇಂಡಿಯಾ ಪುನರ್ರಚನೆ ಯೋಜನೆಗಾಗಿ ಸಾಲ ನೀಡಲು ಎಸ್ಬಿಐ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಅವನ್ನು ಶೀಘ್ರವೇ ನಿವಾರಿಸಲಾಗುವುದು; ನಾಗರಿಕ ವಿಮಾನಯಾನ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿಯವರು ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಹೇಳಿದ್ದಾರೆ.