ಕೃಷಿಕರ ಸಮಸ್ಯೆಗೆ ಪರಿಹಾರ ಒದಗಿಸುವುದರ ಜತೆಯಲ್ಲಿ ಗ್ರಾಮೀಣ ಹಾಗೂ ನಗರವಾಸಿಗಳ ವಸತಿ, ನೀರಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಬಡತನ ರೇಖೆಗಿಂತ ಸ್ವಲ್ಪ ಮೇಲೆ ಬಂದಿರುವ ಆದರೆ ಮಧ್ಯಮ ವರ್ಗಕ್ಕೆ ಸೇರದವರನ್ನು `ನವ ಮಧ್ಯಮ ವರ್ಗ'ಕ್ಕೆ ಸೇರಿಸಿರುವ ಮೋದಿ, ಇಂತಹ ವರ್ಗಕ್ಕೆ ಸೇರುವ ಎಲ್ಲರಿಗೂ ವಿವಿಧ ಯೋಜನೆಗಳ ಮೂಲಕ ಪ್ರಯೋಜನ ಒದಗಿಸಲಾಗುವುದು ಎಂದಿದ್ದಾರೆ.