ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು- ಚುರುಕು

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಣ್ಣಪುಟ್ಟ ಸಮಸ್ಯೆಗೂ ಆ್ಯಂಟಿಬಯೊಟಿಕ್ ಔಷಧಿಗಳ ಬಳಕೆ ಸರಿಯಲ್ಲ, ಇವು ಮುಂದೆ ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಯಾವಾಗ ಅವುಗಳನ್ನು ಬಳಸಬೇಕು, ಯಾವಾಗ ಅಲ್ಲ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು.
                                  * * *

ಎದೆಯುರಿ ಅಥವಾ ಹುಳಿತೇಗು ಇದ್ದಾಗ ಮಸಾಲೆಯುಕ್ತ ಆಹಾರದಿಂದ ದೂರವಿರಿ. ಮಲಗುವ ಸಮಯದಲ್ಲಿ ಬೆಳ್ಳುಳ್ಳಿ, ಮೆಣಸಿನಕಾಯಿಯಂತಹ ಮಸಾಲೆ ಪದಾರ್ಥಗಳನ್ನು ಬಳಸಿ ಮಾಡಿದ ಆಹಾರವನ್ನು ಹೆಚ್ಚಾಗಿ ತಿನ್ನಬೇಡಿ. ಇದು ಎದೆಯುರಿ ಅಥವಾ ಅಜೀರ್ಣಕ್ಕೆ ಕಾರಣವಾಗಿ ಸುಖನಿದ್ರೆಗೆ ಅಡ್ಡಿ ಉಂಟು ಮಾಡಬಹುದು.
                                   * * *

ನಿಮ್ಮ ಮೂಳೆ ಗಟ್ಟಿಯಾಗಿರಬೇಕೇ? ಹಾಗಿದ್ದರೆ ಕಡಿವೆು ಕೊಬ್ಬು ಇರುವ ಆಹಾರ ಸೇವಿಸಿ. ಅಷ್ಟೇ ಅಲ್ಲ ಕೆಲ ಕಾಲ ಬಿಸಿಲಿನಲ್ಲಿ ಕಳೆಯುವುದನ್ನು ಮರೆಯದಿರಿ.
                                        * * *

ದಿನಕ್ಕೆ 10 ಗಂಟೆಗಿಂತ ಕಡಿವೆು ನಿದ್ರೆ ಮಾಡುವ ಮಕ್ಕಳು ಸಿಡುಕಾಡುವುದು ಸಾಮಾನ್ಯ. ಅಲ್ಲದೆ ಅವರು ಅತಿಯಾದ ಚಟುವಟಿಕೆ, ವಾದಪ್ರಿಯರು, ಅವಿಧೇಯರು, ಆಕ್ರಮಣಶೀಲರೂ ಆಗಿರುತ್ತಾರೆ.
                                        * * *

ಒಂದೇ ಬಾರಿ ರಕ್ತದೊತ್ತಡ ಪರೀಕ್ಷಿಸಿ, ಹೆಚ್ಚಾಗಿರುವುದು ಕಂಡ ಕೂಡಲೇ ಚಿಕಿತ್ಸೆ ಪಡೆಯುವುದು ಸರಿಯಲ್ಲ. ದಿನಕ್ಕೆ ಎರಡು ಬಾರಿಯಂತೆ ಸತತವಾಗಿ ಐದು ದಿನ ರಕ್ತದೊತ್ತಡವನ್ನು ಪರೀಕ್ಷೆಗೆ ಒಳಪಡಿಸಿ, ನಂತರವಷ್ಟೇ ಚಿಕಿತ್ಸೆಗೆ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT