ಆಧುನಿಕ ಮತ್ತು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೇಸಾಯ ಮಾಡುವ ರೈತರು ದನಕರುಗಳನ್ನು ಸಾಕಿರುತ್ತಾರೆ. ಹೈನುಗಾರಿಕೆ ಇತ್ತೀಚಿನ ವರ್ಷಗಳಲ್ಲಿ ಬೇಸಾಯಕ್ಕಿಂತ ಹೆಚ್ಚು ಜನಪ್ರಿಯವಾಗುತ್ತಿದೆ. ಮಿಶ್ರ ತಳಿಯ ಹಸುಗಳು ಸಾಕಣೆ ಕಷ್ಟ.
ಬಹುತೇಕ ಹೈನುಗಾರರು ಆಲೋಪತಿ ಪಶುವೈದ್ಯರನ್ನೇ ಅವಲಂಬಿಸಿದ್ದಾರೆ. ಹೃದಯಾಘಾತ, ಮೂತ್ರಪಿಂಡ ವೈಫಲ್ಯ,ಉಸಿರಾಟದ ತೊಂದರೆಯಿಂದ ನರಳುವ ಹಸು, ಎಮ್ಮೆಗಳಿಗೆ ಈಗ ಶಸ್ತ್ರಚಿಕಿತ್ಸೆ ಮಾಡುವ ಪದ್ಧತಿ ಇದೆ.
ಆದರೆ ಅದನ್ನು ನಿರ್ಧರಿಸಲು ಎಕ್ಸ್ರೇ ಯಂತ್ರಗಳ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆ ಇರಬೇಕು. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.