ಬೆಂಗಳೂರು: ದಕ್ಷಿಣ ಕನ್ನಡ ಜೈನ ಮೈತ್ರಿಕೂಟವು ಪ್ರಸಕ್ತ ಸಾಲಿನ `ಮಹಾಕವಿ ರತ್ನಾಕರವರ್ಣಿ~ ಪ್ರಶಸ್ತಿಗೆ ಉಡುಪಿಯ ಜ್ಯೋತಿಷಿಗಳಾದ ವಾಸ್ತುಶಾಸ್ತ್ರಜ್ಞ ಪಾದೂರು ಧರ್ಮರಾಜ ಇಂದ್ರ ಅವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿ10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದು ಕೂಟದ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.