ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸುತ್ತಿರುವ `ಯಾರೇ ಕೂಗಾಡಲಿ~ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.
18 ದಿನ ನಡೆದ ಚಿತ್ರೀಕರಣದಲ್ಲಿ ಪುನೀತ್ ರಾಜ್ಕುಮಾರ್, ಯೋಗೀಶ್, ಭಾವನಾ, ಸಾಧುಕೋಕಿಲ, ಸಿಂಧು ಲೋಕನಾಥ್ ಭಾಗವಹಿಸಿದ್ದರು. ನಗರದ ಸುತ್ತಮುತ್ತ ಚಿತ್ರದ ಹಲವು ದೃಶ್ಯಗಳಿಗೆ ಕ್ಯಾಮೆರಾ ಹಿಡಿದಿದ್ದು ಸುಕುಮಾರ್.
ದ್ವಿತೀಯ ಹಂತದ ಚಿತ್ರೀಕರಣವು ಈ ತಿಂಗಳ 20 ರಿಂದ ಆರಂಭವಾಗಲಿದೆ ಎಂದು ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ. ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ ರಚಿಸಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ.
ನಾಗೇಂದ್ರ, ಆಶಾರಾಣಿ, ವರ್ಷಕೃಷ್ಣ, ಚಂದ್ರು, ಅಚ್ಯುತರಾವ್, ಲಕ್ಷ್ಮೀಹೆಗ್ಡೆ, ರಾಕೇಶ್ ಅಡಿಗ, ರವಿಶಂಕರ್, ಅಚ್ಯುತ್ಕುಮಾರ್, ಸಂದೀಪ್, ಅಖಿಲಾ, ಮುಂತಾದವರು ತಾರಾಗಣದಲ್ಲಿದ್ದಾರೆ.