ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಡಿ ಶಾಸಕನ ಹತ್ಯೆ: ನಕ್ಸಲ್ ಕೃತ್ಯದ ಶಂಕೆ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭುವನೇಶ್ವರ/ಒಡಿಶಾ, (ಪಿಟಿಐ):  ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತಾರೂಢ ಬಿಜೆಡಿಯ ಉಮರಕೋಟ್ ಕ್ಷೇತ್ರದ ಶಾಸಕ ಜಗಬಂಧು ಮಜ್ಹಿ ಹಾಗೂ ಅವರ ಭದ್ರತಾ ಸಿಬ್ಬಂದಿಯನ್ನು ಶಂಕಿತ ಮಾವೊವಾದಿ ಉಗ್ರರು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ನಕ್ಸಲೀಯರ ಪ್ರಭಾವಿರುವ ರಾಯಗಡದ ನವರಂಗಪುರ ಜಿಲ್ಲೆಯ ಬೋಲಾ ಗ್ರಾಮದಲ್ಲಿ ನಡೆಯುತ್ತಿದ್ದ ಪಟ್ಟಾ ವಿತರಣೆ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ.

39 ವರ್ಷದ ಜಗಬಂಧು ಅವರ ಮೇಲೆ ನಾಲ್ವರು ಅಪರಿಚಿತರ ಗುಂಪು ಹಠಾತ್ ಗುಂಡಿನ ದಾಳಿ ನಡೆಸಿತು.  ದಾಳಿಯಲ್ಲಿ ಶಾಸಕ ಮತ್ತು ಅವರ ಭದ್ರತಾ ಸಿಬ್ಬಂದಿ ಪಿ.ಕೆ. ಪತ್ರೊ ಎಂಬುವವರು ಸಾವನ್ನಪ್ಪಿದರು.

2004ರಲ್ಲಿ ಅಪರಿಚಿತರು ನಡೆಸಿದ ದಾಳಿಯಲ್ಲಿ ಬದುಕುಳಿದಿದ್ದ ಅವರು ಗಾಲಿಕುರ್ಚಿಯನ್ನು ಬಳಸುತ್ತಿದ್ದರು. ಉಮರ್‌ಕೋಟ್ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದು ಮಾವೊವಾದಿಗಳ ಕೃತ್ಯವಿರಬಹುದು ಎಂದು ಡಿಜಿಪಿ ಮನಮೋಹನ್ ಅವರು ಶಂಕಿಸಿದ್ದಾರೆ.         
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT