ಕಠ್ಮಂಡು (ಪಿಟಿಐ): ಇಲ್ಲಿಗೆ ಭೇಟಿ ನೀಡಿರುವ ಕೇಂದ್ರ ಇಂಧನ ಸಚಿವ ಫಾರೂಕ್ ಅಬ್ದುಲ್ಲಾ ಅವರ ನೇತೃತ್ವದ ನಿಯೋಗವು ಶನಿವಾರ ನೇಪಾಳ ಅಧ್ಯಕ್ಷ ರಾಮ್ ಬರಾನ್ ಯಾದವ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿತು.
ವಾಣಿಜ್ಯ ಕಾರ್ಯದರ್ಶಿಗಳ ಸಭೆ: ನೇಪಾಳ ಸಹವರ್ತಿಯೊಡನೆ ಸಭೆ ನಡೆಸಿದ ಭಾರತದ ವಾಣಿಜ್ಯ ಕಾರ್ಯದರ್ಶಿ ಎಸ್.ಆರ್. ಶರ್ಮಾ. ‘ನೇಪಾಳ ಬಯಸಿದರೆ ಮತ್ತೊಮ್ಮೆ 1955ರ ರೀತಿಯ ಸಾಗಣೆ ಒಪ್ಪಂದ ಮಾಡಿಕೊಳ್ಳಲು ಭಾರತ ಬಯಸುತ್ತದೆ’ ಎಂದು ಹೇಳಿದರು.