ರಾಣೆಬೆನ್ನೂರು: ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಮಡಿವಾಳರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಬುಧವಾರ ತಹಶೀಲ್ದಾರ ಹನುಮಂತಪ್ಪ ಬಡಿದಾಳ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಡಿವಾಳ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಮಡಿವಾಳರ ಮಾತನಾಡಿ, ಮಡಿವಾಳ ಜನಾಂಗ ಎಲ್ಲಾ ಕ್ಷೇತ್ರಗಳಲ್ಲಿ ಅತೀ ಹಿಂದುಳಿದ ಜನಾಂಗವಾಗಿದೆ. ರಾಷ್ಟ್ರದ ಇತರೆ ೧೭ ರಾಜ್ಯಗಳಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಿವೆ. ಕರ್ನಾಟಕ ರಾಜ್ಯದಲ್ಲಿ ಪ್ರೊ.ಅನ್ನಪೂರ್ಣಾ ವರದಿಯ ಅನುಸಾರ ಮಡಿವಾಳ ಜನಾಂಗವನ್ನು ಪಜಾಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಮಡಿವಾಳ ಮಾಚಿದೇವರ ಜನ್ಮ ದಿನವನ್ನು ಸಂವಿಧಾನಾತ್ಮಕವಾಗಿ ಮಾಚಿದೇವ ಜಯಂತಿ ಎಂದು ಸರ್ಕಾರವೇ ಆಚರಿಸಲು ಘೋಷಣೆ ಮಾಡಬೇಕು, ಮಾಚಿದೇವರ ಜನ್ಮಸ್ಥಳ ಸಿಂಧಗಿ ತಾಲ್ಲೂಕಿನ ದೇವರಹಿಪ್ಪರಗಿಯನ್ನು ಅಭಿವೃದ್ಧಿಪಡಿಸಬೇಕು, ಮಾಚಿದೇವ ಪ್ರಾಧಿಕಾರ ಮತ್ತು ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ ೫ರಂದು ಬೆಳಿಗ್ಗೆ ೯.೩೦ಕ್ಕೆ ಬೆಂಗಳೂರಿನ ಬಸವನಗುಡಿ ಹತ್ತಿರ ಇರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು, ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಹನುಮಂತಪ್ಪ. ಫಕ್ಕೀರಪ್ಪ. ಮಡಿವಾಳರ, ಕುಮಾರ ಡಿ.ಮಡಿವಾಳರ, ಎಂ.ಚಿರಂಜೀವಿ, ಅನಿಲ ಮಡಿವಾಳರ, ಅಶೋಕಸ್ವಾಮಿ ಮಡಿವಾಳರ, ದೇವೇಂದ್ರ ಮಡಿವಾಳರ, ಮಧುಕುಮಾರ ಮಡಿವಾಳರ, ಸಂತೋಷ ಮಡಿವಾಳರ, ಜಿ,ಜಿ,ಮಡಿವಾಳರ, ಮನೋಹರ ಮಡಿವಾಳರ, ಎ.ಡಿ ಮಡಿವಾಳರ, ಕೆ.ಡಿ ಮಡಿವಾಳರ, ನಿಂಗಪ್ಪ ಮಡಿವಾಳರ, ಮಹೇಶಪ್ಪ ಮಡಿವಾಳರ, ಈರಣ್ಣ ದೊಡ್ಡಮನಿ, ವಿಜಯ ಮಡಿವಾಳರ ಉಪಸ್ಥಿತರಿದ್ದರು.