ಕರ್ನಾಟಕದ ನಾಲ್ವರು ಪ್ರಮುಖ ಆಟಗಾರ್ತಿಯರಾದ ರಂಜಿತಾ (ಗೋಲಿ), ಮಿಡ್ಫೀಲ್ಡರ್ ರಕ್ಷಿತಾ, ಮುನ್ಪಡೆಯಲ್ಲಿದ್ದ ಕುಲಸಂಬಿ, ಸಯಿರಾ ಬಾನು ಅವರಿಂದ ಉತ್ತಮ ಪ್ರದರ್ಶನ ಕಂಡುಬರಲಿಲ್ಲ. ಈ ನಾಲ್ವರು ಆಟಗಾರ್ತಿಯರು ಹಾಕಿ ಇಂಡಿಯ ದೆಹಲಿಯಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರಕ್ಕೆ ಗೈರು ಹಾಜರಾಗಿ ವಿವಾದಕ್ಕೆ ಒಳಗಾಗಿದ್ದಾರೆ.
ಇದೇ ಚಾಂಪಿಯನ್ಷಿಪ್ನ ಇನ್ನೊಂದು ಸೆಮಿಫೈನಲ್ನಲ್ಲಿ ಹರಿಯಾಣ ತಂಡದವರು 7-1 ಗೋಲುಗಳಿಂದ ಭೋಪಾಲ್ ತಂಡವನ್ನು ಮಣಿಸಿದರು.