ಟಿಕೆಟ್ ವಂಚಿತ
ಪ್ರಮುಖರ ಬೆಂಬಲಿಗರಿಂದ
ಭಾರಿ ಪ್ರತಿಭಟನೆ
ಇದು ಎಲ್ಲಾ ಪಕ್ಷಗಳಲ್ಲೂ
ಉದ್ಭವವಾಗಿರುವ
ಮಾಮೂಲಿ ಘಟನೆ
ಅಭ್ಯರ್ಥಿಗಳ ಆಯ್ಕೆಯಲ್ಲಿ
ಪಾಲಿಸಲಾಗಿದೆಯಂತೆ ಕೆಲ
ಮಾನದಂಡಗಳ ಪರಿಗಣನೆ
ಜತೆಗೆ ಆಗಿದೆಯಂತೆ
ರಹಸ್ಯವಾಗಿ ಕೆಲವರಿಗೆ
ಕಪ್ಪುಹಣದ ರವಾನೆ
ಹೀಗೆ ಕೆಲ ನೇತಾರರು
ಭರ್ಜರಿಯಾಗಿ ಉಂಡು
ಆಗಿದ್ದಾರಂತೆ
ಇನ್ನಷ್ಟು ದುಂಡು