ಅಮೀನಗಡ: ಗುಡೂರ ಸರ್ಕಾರಿ ಪಿ.ಯು ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಮಹಾತ್ಮಗಾಂಧಿ ಜಯಂತಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.
ಗಾಂಧಿ ಜಯಂತಿ ದಿನ ಗುಡೂರ ಗ್ರಾಮದ ಬಸ್ ನಿಲ್ದಾಣ ಬಳಿ ಬೃಹತ್ ಪ್ರಮಾಣದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರಜಾಪ್ರಭುತ್ವದ ಮೌಲ್ಯಗಳ, ಸ್ವಚ್ಚತೆ, ಮತದಾನ ಕುರಿತ ಬೀದಿ ನಾಟಕ ಅಭಿನಯಿಸಿ, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಯಿತು. ಪ್ರಾಂಶುಪಾಲ ಎಸ್.ಎಮ್. ಸಾರಂಗಿ, ಕುಮಾರಿ ಜೆ.ಆರ್. ಪಾಟೀಲ, ಆಯ್.ಎಮ್. ದೊಡಮನಿ, ಎಚ್.ವಾಯ್. ಕುಂದರಗಿ, ಎನ್.ಎಚ್. ಮರ್ಜಿ, ಜಿ.ಪಿ. ಹಾದಿಮನಿ ಹಾಜರಿದ್ದರು.