ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಶನ ಆದೇಶ ಪತ್ರ ವಿತರಣೆ

Last Updated 9 ಡಿಸೆಂಬರ್ 2013, 8:36 IST
ಅಕ್ಷರ ಗಾತ್ರ

ಜಮಖಂಡಿ: ಅರ್ಹ ವಯೋವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಮಾಸಾ­ಶನ ಸಿಕ್ಕಿಲ್ಲ ಎಂಬ ದೂರು ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿ­ದ್ದವು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಇಡೀ ರಾಜ್ಯದಾದ್ಯಂತ ಗ್ರಾಮ ಮಟ್ಟದಲ್ಲಿ ಸಮೀಕ್ಷೆ ಕೈಗೊಂಡು ಮಾಸಾಶನ ಮಂಜೂರು ಮಾಡಲಾ­ಗುತ್ತಿದೆ ಎಂದು ಸಚಿವೆ ಉಮಾಶ್ರೀ ಹೇಳಿದರು.

ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಕಂದಾಯ ಇಲಾಖೆ ಶನಿವಾರ ಏರ್ಪ­ಡಿಸಿದ್ದ ತೇರದಾಳ ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಅರ್ಹ ಫಲಾನುಭವಿಗಳಿಗೆ ಮಸಾಶನ ಮಂಜೂರಾತಿ ಆದೇಶ ಪತ್ರ ಮತ್ತು ಪರಿಹಾರಧನ ಚೆಕ್‌ ವಿತರಿಸಿ ಅವರು ಮಾತನಾಡಿದರು.

2013ರ ಜುಲೈ ತಿಂಗಳಿನಿಂದ ಈ ವರೆಗೆ ತೇರದಾಳ ಹೋಬಳಿ ಮಟ್ಟದಲ್ಲಿ 2500 ಕ್ಕಿಂತ ಹೆಚ್ಚು ಅರ್ಹ ಫಲಾ­ನುಭವಿಗಳನ್ನು ಸಮೀಕ್ಷೆ ಮೂಲಕ ಗುರುತಿಸಿ ಮಾಸಾಶನ ಮಂಜೂರಾತಿ ಪತ್ರ ವಿತರಿಸಿ ಜನರ ಸಂಕಷ್ಟಕ್ಕೆ ಸರ್ಕಾರ ನೆರವಾಗಿದೆ ಎಂದರು.

ಬಡವರಿಗೋಸ್ಕರ ಅಧಿಕಾರಕ್ಕೆ ಬಂದಿ­ರುವ ಮುಖ್ಯಮಂತ್ರಿ ಸಿದ್ದ­ರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರಿಗೆ ಮೊದಲ ಆದ್ಯತೆ ನೀಡು­ತ್ತಿದೆ. ಹಾಗಂತ ಶ್ರೀಮಂತರ ವಿರೋಧಿ ಅಲ್ಲ. ರೈತರ, ನೇಕಾರರ ಕೋಟ್ಯಂತರ ರೂಪಾಯಿ ಸಾಲಮನ್ನಾ ಮಾಡಲಾಗಿದೆ. ಪ್ರತಿ ಲೀಟರ್‌ ಹಾಲಿನ ಪ್ರೋತ್ಸಾಹಧನವನ್ನು ₨ 4ಕ್ಕೆ ಹೆಚ್ಚಿಸಲಾಗಿದೆ ಎಂದರು.

ತಹಶೀಲ್ದಾರ್‌ ರವೀಂದ್ರ ಕರಲಿಂಗ­ಣ್ಣವರ ಪ್ರಾಸ್ತಾವಿಕವಾಗಿ ಮಾತನಾ­ಡಿದರು. ತಾಲ್ಲೂಕು ಪಂಚಾ­ಯಿ್ತ ಸದಸ್ಯ ಸಂಗಣ್ಣ ಪೂಜಾರಿ, ಪಶು­ವೈದ್ಯ ಡಾ.ಆರ್.ಡಿ. ಕುಲಕರ್ಣಿ, ಗ್ರೇಡ್‌ – 2 ತಹಶೀಲ್ದಾರ್‌ ಢವಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT