ಚೆನೈ(ಐಎಎನ್ಎಸ್): ಕಲಾಪ ಬಹಿಷ್ಕರಿಸಿ ಹೊರನಡೆಯಲು ಡಿಎಂಡಿಕೆ ಹಾಗೂ ಡಿಎಂಕೆ ಸದಸ್ಯರನ್ನು ಪ್ರಚೋದಿಸಿದ ವಿರೋಧ ಪಕ್ಷದ ನಾಯಕ ವಿಜಯಕಾಂತ್ ಅವರನ್ನು 10ದಿನಗಳ ಕಾಲ ವಿಧಾನಸಭಾ ಅಧಿವೇಶನದಿಂದ ಗುರುವಾರ ಅಮಾನತುಗೊಳಿಸಲಾಗಿದೆ.
ಉಳಿದ ಡಿಎಂಡಿಕೆ ಸದಸ್ಯರಿಗೂ ಇಂಥ ತಪ್ಪುಗಳನ್ನು ಮತ್ತೆ ಮಾಡದಂತೆ ವಿಧಾನಸಭೆಯಲ್ಲಿ ಅಂಗೀಕರಿಸಿರುವ ನಿರ್ಣಯದಲ್ಲಿ ಎಚ್ಚರಿಕೆ ನೀಡಲಾಗಿದೆ. ವಿಧಾನಸಭೆಯಲ್ಲಿ ಸಿಎಂ ಜಯಲಲಿತಾ ಹಾಗೂ ವಿಜಯ್ಕಾಂತ್ ನಡುವೆ ಸದನದಲ್ಲಿ ಬುಧವಾರ ತೀವ್ರ ಮಾತಿನ ಚಕಮಕಿ ನಡೆದಿತ್ತು.