ಗದಗ: ಸ್ಥಗಿತಗೊಳಿಸಿರುವ ವೃದ್ಧಾಪ್ಯ ವೇತನವನ್ನು ನೀಡಬೇಕು ಎಂದು ಆಗ್ರಹಿಸಿ ವೃದ್ಧರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟದ ನೇತೃತ್ವದಲ್ಲಿ ಹೊಂಬಳ, ಗದಗ, ಬೆಟಗೇರಿಯ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
3-4 ತಿಂಗಳಿನಿಂದ ಪಿಂಚಣಿ ನೀಡು ತ್ತಿಲ್ಲ. ಹಿಂದಿನ ಪಟ್ಟಿಯಿಂದ ಕೈ ಬಿಡ ಲಾದ ಫಲಾನುಭವಿಗಳಿಗೆ ಮತ್ತೆ ಅರ್ಹತೆ ನೀಡಬೇಕು, 70-80 ವರ್ಷ ವಯಸ್ಸಾದವರನ್ನು ಸಮರ್ಪಕ ತನಿಖೆ ನಡೆಸದೆ ಪಿಂಚಣಿ ಪಟ್ಟಿಯಿಂದ ಕೈ ಬಿಡಲಾಗಿದೆ. ಅನರ್ಹರೆಂದು ಖಚಿತ ಪಡಿಸಿಕೊಳ್ಳುವವರೆಗೂ ಪಿಂಚಣಿ ನೀಡಬೇಕು. ಪಿಂಚಣಿದಾರರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಮೂಲ ಪಿಂಚಣಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಯಾಗ ಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ತುಟ್ಟಿ ಭತ್ಯೆ ನೀಡಬೇಕು. ಪರಿಣಿತರನ್ನು ಒಳಗೊಂಡ ಸಮಿತಿ ರಚಿಸಿ ಪಿಂಚಣಿ ಯನ್ನು ಹಕ್ಕಾಗಿ ಮಾಡಲು ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.