ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರ: ಉಗ್ರರ ದಾಳಿಗೆ ಎಸೈ ಬಲಿ, ಇಬ್ಬರು ಪೊಲೀಸರಿಗೆ ಗಾಯ

Last Updated 2 ಡಿಸೆಂಬರ್ 2013, 14:00 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ಕಾಶ್ಮೀರದ ಬದಗಮ್ ಜಿಲ್ಲೆಯಲ್ಲಿನ ಚದೂರ ಪೊಲೀಸ್ ಠಾಣೆಯ ಹೊರಗೆ ನೆರೆದಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಸೋಮವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ `ಸ್ಟೇಶನ್ ಹೌಸ್ ಆಫಿಸರ್' ಸಬ್ ಇನ್ಸ್‌ಪೇಕ್ಟರ್ ಶಬೀರ್ ಅಹಮ್ಮದ್ ಮೃತಪಟ್ಟು, ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಶಬೀರ್ ಕೊನೆಯುಸಿರೆಳೆದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಗೊಂಡಿರುವ ಪೇದೆಗಳನ್ನು ಮೊಹಮ್ಮದ್ ಶಫಿ ಮತ್ತು ಎಸ್‌ಪಿಒ ಪಿರ್ಧೊಸ್ ಅಹಮದ್ ಎಂದು ಗುರ್ತಿಸಲಾಗಿದೆ.
ಈ ದಾಳಿ ಕುರಿತಂತೆ ಇವರೆಗೆ ಯಾವುದೇ ಉಗ್ರರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT