ಮೋದಿ ಪ್ರಧಾನಿಯಾಗುವ ಭಾರತದಲ್ಲಿ ನಾನು ಇರಲಾರೆ ಎಂಬರ್ಥದಲ್ಲಿ ಸಾಹಿತಿ ಯು.ಆರ್. ಅನಂತಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ಅವರ ಮಾತಿಗೆ ನನ್ನ ಸಹಮತವಿಲ್ಲ.
ಮೋದಿಯವರನ್ನು ಒಪ್ಪದವರು ಅವರಂತೆ ಭಾರತ ಬಿಟ್ಟು ಹೋದರೆ ಮೋದಿಯನ್ನು ನಿಯಂತ್ರಿಸುವವರಾರು? ಇರಬೇಕು ಇದ್ದು ಜೈಸಬೇಕು ಇದೇ ಪ್ರತಿಯೊಬ್ಬರ ಮಂತ್ರವಾಗಬೇಕು, ಅಲ್ಲವೇ? ಅನಂತಮೂರ್ತಿಯವರು ‘ನಮ್ಮಂತಹವರು ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕು’ ಎಂದಿದ್ದಾರೆ. ಇದು ನಿಜವಾದ ಹೋರಾಟಗಾರನ ಮಾತು.