ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದ ಹಿರೇಮಠದ ಪೀಠಾಧಿಪತಿ ನೂರಂದೇಶ್ವರ ಶಿವಾಚಾರ್ಯರನ್ನು ಅವರ ಕುಟುಂಬದ ಸದಸ್ಯರೇ ಆಸ್ತಿ ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಕೊಚ್ಚಿ ಕೊಲೆ ಮಾಡಿರುವುದು ದುರದೃಷ್ಟಕರ ಸಂಗತಿ.
ತರುಣ ಸ್ವಾಮೀಜಿ ಮಠದ ಆಸ್ತಿಯನ್ನು ಉಳಿಸಲು ನ್ಯಾಯಾಲಯಕ್ಕೆ ಹೋಗಿ ಯಶಸ್ವಿಯಾಗಿದ್ದರು. ಮಠಕ್ಕೆ ಸೂಕ್ತ ಉತ್ತರಾಧಿಕಾರಿಯನ್ನು ನೇಮಿಸಿ ಮಠದ ಆಸ್ತಿಯನ್ನು ಉಳಿಸುವುದೇ `ಸಮಾಜ~ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ.