ಅಧಿಕಾರಿಗಳ ವಾಪಸಿಗೆ ಒತ್ತಾಯ
ಕರಾಚಿ, ಸೆ. 8- ಇಲ್ಲಿರುವ ಭಾರತೀಯ ಹೈಕಮಿಷನ್ನ ವೈಮಾನಿಕ ವಿಷಯಗಳ ಸಲಹೆಗಾರ ವಿಂಗ್ ಕಮ್ಯಾಂಡರ್ ಪಿ.ಬಿ. ಪವಾರ್ ಮತ್ತು ಇತರ ಮೂವರು ಅಧಿಕಾರಿಗಳನ್ನು ತಕ್ಷಣ ಭಾರತಕ್ಕೆ ವಾಪಸು ಕರೆಸಿಕೊಳ್ಳಬೇಕೆಂದು ಪಾಕಿಸ್ತಾನ್ ಸರಕಾರ ಒತ್ತಾಯ ಮಾಡಿದೆ.
ಇವರುಗಳು ಭಾರಿ ಪ್ರಮಾಣದಲ್ಲಿ ಯೋಜಿತ ಗೂಢಚರ್ಯೆ ನಡೆಸುತ್ತಿದ್ದರೆಂಬ ಕಾರಣದಿಂದ ಅವರ ವಾಪಸಿಗೆ ಒತ್ತಾಯ ಮಾಡಲಾಗಿದೆಯೆಂದು ಅಧಿಕೃತವಾಗಿ ತಿಳಿಸಲಾಗಿದೆ.