ಮದುಮಗ ಸಿಂಗರಗೊಂಡಿದ್ದರೆ, ಮದುಮಗಳ ಮೊಗದ ಮೇಲೆ ಹುಸಿನಾಚಿಕೆ. ಯಾಕೆಂದರೆ, ಅವರಿಬ್ಬರೂ ನಿಜಕ್ಕೂ ಮದುವೆಯಾಗಲಿಲ್ಲ. ಅಲ್ಲಿ ನಡೆದದ್ದು ಮದುವೆಯ ನಾಟಕ. ಬೀಸೋಕಲ್ಲಿನ ಮುಂದೆ ಕುಳಿತಿದ್ದ ಆಧುನಿಕ ವನಿತೆಯರು ತೊಟ್ಟಿದ್ದೂ ವೇಷವನ್ನೇ. ಅವರ `ಹಳ್ಳಿಆಟ'ದ ಚಿತ್ರಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ತೆಗೆಯುವ ಕೈಗಳೂ ಅಲ್ಲಿದ್ದವು. ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಕಲಾ ಕಾಲೇಜು ಹಾಗೂ ಜಾನಪದ ಪರಿಷತ್ ಇತ್ತೀಚೆಗೆ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ `ಜನಪದ ಹಬ್ಬ'ದ ದೃಶ್ಯಗಳಿವು.