ಒಳಚರಂಡಿ ಸೌಲಭ್ಯ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ನಾಯಿ, ಹಂದಿಗಳ ಹಾವಳಿ ಹೆಚ್ಚಾಗುತ್ತಿದ್ದು ಅನಾಹುತ ಸಂಭವಿಸುವ ಮುನ್ನ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ ಎಂದು ನಿವಾಸಿ ಸಂಪತ್ಕುಮಾರ್ ಆರೋಪಿಸಿದರು. ನಗರಸಭೆ 35ನೇ ವಾರ್ಡ್ ಸದಸ್ಯ ಮುನಿಯಪ್ಪ, ಸಂಘದ ಪದಾಧಿಕಾರಿಗಳಾದ ಸಿದ್ದರಾಜು, ಚಂದ್ರಕುಮಾರ್, ಎ.ಎಸ್.ಮಲ್ಲಿಕಾರ್ಜುನಯ್ಯ, ದಯಾನಂದ ಇತರರು ನೇತೃತ್ವ ವಹಿಸಿದ್ದರು.