ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಟು ಟೀಕಾಕಾರ ಎಂದೇ ಗುರುತಿಸಿಕೊಂಡಿ
ರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು, ಮೋದಿ ಕುರಿತಾಗಿ ಅನಿರೀಕ್ಷಿತ ಹೇಳಿಕೆಗಳನ್ನು ನೀಡಿದ್ದಾರೆ.
ಮೋದಿ ಅವರು ‘ಮತಾಂಧತೆ’ ಸಿದ್ಧಾಂತಗಳಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳಿರುವ ದಿಗ್ವಿಜಯ್ ಸಿಂಗ್, ‘ಚಹ ಮಾರುವ ವ್ಯಕ್ತಿ ಕೂಡ ನಮ್ಮ ದೇಶದ ಪ್ರಧಾನಿಯಾಗಬಹುದು’ ಎಂದು ಹೇಳಿದ್ದಾರೆ. ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಬಿಜೆಪಿ ಸ್ವಾಗತಿಸಿದೆ.