ಶ್ರೀನಗರ ಕಿಟ್ಟಿ, ಅಜಯ್ ರಾವ್, ಪ್ರೇಮ್ ಹಾಗೂ ಪ್ರಜ್ವಲ್ ದೇವರಾಜ್ ಗೌರವ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ನಾಲ್ವರು ಸ್ನೇಹಿತರ ಪ್ರೀತಿಯಲ್ಲಿನ ಆಸಕ್ತಿ, ಭಿನ್ನಾಭಿಪ್ರಾಯ, ಒಂಟಿತನ ಹೀಗೆ ಜೀವನದ ಆಯಾಮಗಳ ಮೇಲೆ ‘ಮಾಮು ಟೀ ಅಂಗಡಿ’ ಕಥೆಯನ್ನು ಹೆಣೆಯಲಾಗಿದೆ. ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ದನ್, ರೇಖಾ ದಾಸ್ ಇತರರು ತಾರಾಗಣದಲ್ಲಿ ಇದ್ದಾರೆ. ರಾಜೇಶ್ ರಾಮನಾಥ್ ಸಂಗೀತ, ನಂದಕುಮಾರ ಛಾಯಾಗ್ರಹಣ ಚಿತ್ರಕ್ಕಿದೆ.