ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಆರ್.ಮಂಜುನಾಥ್, ಮಂಡ್ಯ

ಸಂಪರ್ಕ:
ADVERTISEMENT

ಆಧಾರ್ ಕಾರ್ಡ್ ನೀಡಿ

ಕೇಂದ್ರ ಸರ್ಕಾರವು ಬಹಳ ಉತ್ಸಾಹದಿಂದ ಆಧಾರ್ ಕಾರ್ಡ್ ನೀಡುವ ಯೋಜನೆಯನ್ನು ಆರಂಭಿಸಿತು. ಬಹುತೇಕ ಕಡೆಗಳಲ್ಲಿ ಆಧಾರ್ ಕಾರ್ಡ್ ಪಡೆಯಲು ಜನರು ಫೋಟೋ, ಕಣ್ಣುಗಳ ಸ್ಕ್ಯಾನಿಂಗ್ ಹಾಗೂ ಕೈ ಬೆರಳುಗಳ ಗುರುತು ನೀಡಿ ಆಧಾರ್ ಕಾರ್ಡ್ ಬರುವಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಕೆಲವೇ ವ್ಯಕ್ತಿಗಳಿಗೆ ಮಾತ್ರ ಆಧಾರ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇನ್ನುಳಿದವರಿಗೆ ನೀಡಲು ತಡವೇಕೆ? ಆಧಾರ್ ಕಾರ್ಡ್‌ನ ಸಹಾಯವಾಣಿಗೆ ಯಾವಾಗ ಕರೆ ಮಾಡಿದರೂ ಸಂಪರ್ಕ ಸಿಗುತ್ತಿಲ್ಲ. ಇಂಟರ್‌ನೆಟ್‌ನಲ್ಲಿ ನೋಡಿದರೆ `ಶೀಘ್ರದಲ್ಲೇ ನೀವು ಆಧಾರ್ ಕಾರ್ಡ್ ಪಡೆಯುವಿರಿ' ಎಂದು ಕಳೆದ ಒಂದು ವರ್ಷದಿಂದಲೂ ಬರುತ್ತಿದೆ. ಹೀಗಾದರೆ ಯೋಜನೆ ಸಫಲವಾದೀತೆ? ಆದಷ್ಟು ಬೇಗ ಉಳಿದವರಿಗೆ ಆಧಾರ್ ಕಾರ್ಡ್‌ಗಳನ್ನು ನೀಡಿ ವಿವಿಧ ಸವಲತ್ತುಗಳನ್ನು ಪಡೆಯಲು ಅನುಕೂಲ ಮಾಡಿಕೊಡಿ ಎಂದು ಸಂಬಂಧಪಟ್ಟವರಲ್ಲಿ ವಿನಂತಿ.
Last Updated 25 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT