‘ಸುಧಾರಣೆಯ ಪರ್ವಕಾಲ’
ಮಸೂದೆಯು ದೂರಸಂಪರ್ಕ ಕ್ಷೇತ್ರದ ಸುಧಾರಣೆಯ ಪರ್ವಕಾಲಕ್ಕೆ ಸಾಕ್ಷಿಯಾಗಿದೆ ಎಂದು ವೊಡಾಫೋನ್ ಐಡಿಯಾದ ಸಿಇಒ ಅಕ್ಷಯ್ ಮೂಂದ್ರ ಹೇಳಿದ್ದಾರೆ.
ದೂರಸಂಪರ್ಕ ಕ್ಷೇತ್ರಕ್ಕೆ ಭವಿಷ್ಯದ ಚೌಕಟ್ಟು ರೂಪಿಸಲು ಕೇಂದ್ರ ಮುಂದಾಗಿದೆ. ಇದು ನವ ಭಾರತದ ಅಭಿವೃದ್ಧಿಯ ಆಕಾಂಕ್ಷೆ ಈಡೇರಲು ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ.
ದೇಶದ ಎಲ್ಲಾ ಜನರಿಗೆ ಡಿಜಿಟಲ್ ಸಂಪರ್ಕ ಕಲ್ಪಿಸಲು ನೆರವಾಗಲಿದೆ. ದಂಡ ವಿಧಿಸುವುದನ್ನು ತರ್ಕಬದ್ಧಗೊಳಿಸಬೇಕು ಹಾಗೂ ಸರಿಯಾದ ಮಾರ್ಗದಲ್ಲಿ ಕಾನೂನಿನ ನಿಬಂಧನೆಗಳನ್ನು ಜಾರಿಗೊಳಿಸಬೇಕು ಎಂಬುದು ಉದ್ಯಮದ ಹಲವು ದಿನಗಳ ಬೇಡಿಕೆಯಾಗಿತ್ತು. ಇದನ್ನು ಸರ್ಕಾರ ಪರಿಗಣಿಸಿದೆ ಎಂದಿದ್ದಾರೆ.