ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮದಂತೆ ನೋಂದಾಯಿಸಿಕೊಂಡಿರುವ ಕಂಪನಿಗಳು ತಮ್ಮ ಹಣಕಾಸು ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ,ಈ ಕಂಪನಿಗಳು ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳಿಗೆ2019ರ ಜೂನ್ ಮತ್ತು ಸೆಪ್ಟೆಂಬರ್ ತ್ರೈಮಾಸಿಕ
ಗಳ ಹಣಕಾಸು ವರದಿಯನ್ನು ಸಲ್ಲಿಸಿಲ್ಲ. ಹೀಗಾಗಿ ಈ ಕ್ರಮ ಕೈಗೊಳ್ಳಳಾಗಿದೆ. ಜನವರಿ 29ರ ಒಳಗಾಗಿ ಹಣಕಾಸು ವರದಿ ಸಲ್ಲಿಸಿದರೆ ಅಮಾನತಿಗೆ ಒಳಗಾಗು
ವುದಿಲ್ಲ ಎಂದು ಷೇರುಪೇಟೆಗಳು ತಿಳಿಸಿವೆ. ಜನವರಿ 10ರಿಂದಲೇ ಪ್ರವರ್ತಕರ ಷೇರುಗಳನ್ನು ಮುಂದಿನ ಆದೇಶದವರೆಗೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದೂ ಹೇಳಿವೆ.