ದುಂಡು ಮೇಜಿನ ಸಭೆ ಮಂಡಿಸಿದ ಬೇಡಿಕೆ ಏನು?
* ತೆಂಗು ಉತ್ಪಾದನೆಗೆ ತಗಲುವ ವೆಚ್ಚವನ್ನು ಪಾರದರ್ಶಕವಾಗಿ ಮೌಲ್ಯಮಾಪನ ಮಾಡಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು
* ವ್ಯಾಪಾರ ನೀತಿ ಪುನರ್ ಪರಿಶೀಲಿಸಿ ಪರಿಷ್ಕರಿಸಬೇಕು. ದೇಶೀಯವಾಗಿ ಉತ್ಪಾದನೆ ಹೆಚ್ಚಳ ರಕ್ಷಣೆ ಜತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಸ್ಪರ್ಧೆಗೆ ಸಹಕಾರಿಯಾಗುವಂತಹ ನೀತಿ ರೂಪಿಸಬೇಕು
* ನ್ಯಾಯಯುತ ವ್ಯಾಪಾರ ವ್ಯವಸ್ಥೆ ಜಾರಿಯಾಗುವಂತೆ ನೋಡಿಕೊಳ್ಳಬೇಕು
* ತೆಂಗು ಹಾಗೂ ಅದರ ಉತ್ಪನ್ನಗಳು ಜನರಿಗೆ ನ್ಯಾಯಯುತ ಬೆಲೆಯಲ್ಲಿ ಸಿಗುವಂತಾಗಬೇಕು
* ರೈತ ಸಂಘಟನೆ ನೇತೃತ್ವದಲ್ಲಿ ಮುಕ್ತ ವ್ಯಾಪಾರ ನಿರ್ವಹಣಾ ಘಟಕ ಆರಂಭಿಸಬೇಕು
* ತೆಂಗು ಬೆಳೆಗಾರರಿಗೆ ಮೀಸಲಿಟ್ಟ ಸಬ್ಸಿಡಿ ದುರ್ಬಳಕೆ ತಡೆಗಟ್ಟಬೇಕು
* ‘ಸುರಿ ವಿರೋಧಿ ಕಾಯ್ದೆ’ ಜಾರಿಯಿಂದಆಮದು ತಗ್ಗಿ ದೇಶೀಯವಾಗಿ ಕೊಬ್ಬರಿ ವಹಿವಾಟು ಚೇತರಿಸಿಕೊಳ್ಳಲಿದೆ. ರೈತರಿಗೆ ಉತ್ತಮ ಬೆಲೆ ಸಿಗಲು ಸಹಕಾರಿ