<p><strong>ನವದೆಹಲಿ:</strong> ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಬ್ಯಾಂಕೇತರ ಹಣಕಾಸು ಕಂಪನಿ, ವಿಮಾ ಕಂಪನಿಗಳು ತಮ್ಮ ಪೂರ್ಣಾವಧಿ ನಿರ್ದೇಶಕರಿಗೆ ಸಂಬಂಧಿಸಿದ ವಿಚಕ್ಷಣಾ ವಿಚಾರವನ್ನು ಅವು ಗಮನಕ್ಕೆ ಬಂದ ತಕ್ಷಣ ತಿಳಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯವು ನಿರ್ದೇಶನ ನೀಡಿದೆ.</p>.<p>ಹಣಕಾಸು ಕಂಪನಿಗಳು ತಮ್ಮ ಆಡಳಿತ ಮಂಡಳಿಯ ಪೂರ್ಣಾವಧಿ ನಿರ್ದೇಶಕರಿಗೆ ಸಂಬಂಧಿಸಿದ, ಅವರ ವಿರುದ್ಧ ದಾಖಲಾದ ವಿಚಾರಗಳ ಮಾಹಿತಿಯನ್ನು ತಮ್ಮ ಗಮನಕ್ಕೆ ಬಂದ ತಕ್ಷಣ ಒದಗಿಸುತ್ತಿಲ್ಲ. ಹೀಗಾಗಿ ಹಣಕಾಸು ಸಚಿವಾಲಯದ ಅಧೀನದ ಹಣಕಾಸು ಸೇವೆಗಳ ಇಲಾಖೆಯು ಈ ನಿರ್ದೇಶನ ನೀಡಿದೆ.</p>.<p>ಹಲವಾರು ಪ್ರಕರಣಗಳಲ್ಲಿ, ಖಾಸಗಿ ದೂರುಗಳು, ನ್ಯಾಯಾಲಯ ಹೇಳಿದ ಮಾತುಗಳನ್ನು, ಸಿಬಿಐ ಅಥವಾ ಇತರೆ ಕಾನೂನು ಜಾರಿ ಸಂಸ್ಥೆಗಳಿಂದ ಬಂದಿರುವ ಮಾಹಿತಿಗಳನ್ನು ನಿರ್ದಿಷ್ಟವಾಗಿ ಕೋರಿದಾಗ ಮಾತ್ರ ನೀಡಲಾಗುತ್ತಿದೆ ಎಂದು ಹೇಳಿದೆ.</p>.<p>ನೇಮಕಾತಿ, ಬಡ್ತಿ, ಆಡಳಿತ ಮಂಡಳಿಯ ಹುದ್ದೆಗಳು, ಪೂರ್ಣಾವಧಿ ನಿರ್ದೇಶಕರ ನಿಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡದೇ ಇರುವುದು ಗಂಭೀರ, ಕಳವಳಕಾರಿ ವಿಷಯ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಬ್ಯಾಂಕೇತರ ಹಣಕಾಸು ಕಂಪನಿ, ವಿಮಾ ಕಂಪನಿಗಳು ತಮ್ಮ ಪೂರ್ಣಾವಧಿ ನಿರ್ದೇಶಕರಿಗೆ ಸಂಬಂಧಿಸಿದ ವಿಚಕ್ಷಣಾ ವಿಚಾರವನ್ನು ಅವು ಗಮನಕ್ಕೆ ಬಂದ ತಕ್ಷಣ ತಿಳಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯವು ನಿರ್ದೇಶನ ನೀಡಿದೆ.</p>.<p>ಹಣಕಾಸು ಕಂಪನಿಗಳು ತಮ್ಮ ಆಡಳಿತ ಮಂಡಳಿಯ ಪೂರ್ಣಾವಧಿ ನಿರ್ದೇಶಕರಿಗೆ ಸಂಬಂಧಿಸಿದ, ಅವರ ವಿರುದ್ಧ ದಾಖಲಾದ ವಿಚಾರಗಳ ಮಾಹಿತಿಯನ್ನು ತಮ್ಮ ಗಮನಕ್ಕೆ ಬಂದ ತಕ್ಷಣ ಒದಗಿಸುತ್ತಿಲ್ಲ. ಹೀಗಾಗಿ ಹಣಕಾಸು ಸಚಿವಾಲಯದ ಅಧೀನದ ಹಣಕಾಸು ಸೇವೆಗಳ ಇಲಾಖೆಯು ಈ ನಿರ್ದೇಶನ ನೀಡಿದೆ.</p>.<p>ಹಲವಾರು ಪ್ರಕರಣಗಳಲ್ಲಿ, ಖಾಸಗಿ ದೂರುಗಳು, ನ್ಯಾಯಾಲಯ ಹೇಳಿದ ಮಾತುಗಳನ್ನು, ಸಿಬಿಐ ಅಥವಾ ಇತರೆ ಕಾನೂನು ಜಾರಿ ಸಂಸ್ಥೆಗಳಿಂದ ಬಂದಿರುವ ಮಾಹಿತಿಗಳನ್ನು ನಿರ್ದಿಷ್ಟವಾಗಿ ಕೋರಿದಾಗ ಮಾತ್ರ ನೀಡಲಾಗುತ್ತಿದೆ ಎಂದು ಹೇಳಿದೆ.</p>.<p>ನೇಮಕಾತಿ, ಬಡ್ತಿ, ಆಡಳಿತ ಮಂಡಳಿಯ ಹುದ್ದೆಗಳು, ಪೂರ್ಣಾವಧಿ ನಿರ್ದೇಶಕರ ನಿಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡದೇ ಇರುವುದು ಗಂಭೀರ, ಕಳವಳಕಾರಿ ವಿಷಯ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>