ಈ ಸಂಬಂಧ ಕರಡು ನಿಯಮಗಳನ್ನು ಆರ್ಬಿಐ ಸಿದ್ಧಪಡಿಸಿದೆ. ಅದರಂತೆ, ₹25 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದು, ಸಾಲ ಮರುಪಾವತಿಸುವ ಸಾಮರ್ಥ್ಯ ಇದ್ದರೂ ಬಾಕಿ ತೀರಿಸಲು ನಿರಾಕರಿಸಿದರೆ ಅಂತಹ ಸಾಲಗಾರರನ್ನು ‘ಉದ್ದೇಶಪೂರ್ವ ಸುಸ್ತಿದಾರ’ ಎಂದು ಪರಿಗಣಿಸುವಂತೆ ಬ್ಯಾಂಕ್ಗಳಿಗೆ ಸಲಹೆ ನೀಡಿದೆ.