ಒಂಬತ್ತು ಬ್ಯಾಂಕ್ಗಳನ್ನು ಶಾಶ್ವತವಾಗಿ ಮುಚ್ಚಲು ಆರ್ಬಿಐ ಮುಂದಾಗಿದೆ. ಜನರು ತಮ್ಮ ಠೇವಣಿಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡ ಸಂದೇಶ ಹರಿದಾಡಿತ್ತು. ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೊ–ಆಪರೇಟಿವ್ ಬ್ಯಾಂಕ್ನ (ಪಿಎಂಸಿ) ಕಾರ್ಯನಿರ್ವಹಣೆಗೆ ಆರ್ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಈ ಗಾಳಿ ಸುದ್ದಿ ಹರಡಿತ್ತು. ಇತರ ಬ್ಯಾಂಕ್ಗಳ ಜತೆ ವಿಲೀನಗೊಂಡ ಅಥವಾ ವಿಲೀನ ಪ್ರಕ್ರಿಯೆಯಲ್ಲಿ ಇರುವ ಬ್ಯಾಂಕ್ಗಳನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಲಾಗಿದೆ ಎಂದು ವರದಿಯಾಗಿತ್ತು.