‘ಮಲ್ಯ ಅವರ ಗಡಿಪಾರು ಆದೇಶ, ಸಾಲ ನೀಡುವ ಸಂಸ್ಥೆಗಳು ಮತ್ತು ಸಾಲಗಾರರ ನಡುವಣ ಬಾಂಧವ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಆರ್ಥಿಕ ಚಟುವಟಿಕೆಗಳಲ್ಲಿ ಬಂಡವಾಳ ತೊಡಗಿಸಲು ಸಾಲ ನೀಡುವುದಕ್ಕೆ ತುಂಬ ಮಹತ್ವ ಇದೆ. ಹಣವನ್ನು ಯಾವ ಉದ್ದೇಶಕ್ಕೆ ಸಾಲದ ರೂಪದಲ್ಲಿ ನೀಡಲಾಗಿದೆ ಎನ್ನುವುದನ್ನು ಸಾಲ ಪಡೆದವರು ತಿಳಿದುಕೊಳ್ಳಬೇಕು. ಬ್ಯಾಂಕ್ಗಳೂ ಶುದ್ಧ ಸ್ವರೂಪದ ಬ್ಯಾಂಕಿಂಗ್ ವಹಿವಾಟು ನಡೆಸಬೇಕು ಎನ್ನುವುದನ್ನೂ ಈ ತೀರ್ಪು ಸ್ಪಷ್ಟಪಡಿಸಿದೆ’ ಎಂದು ಹೇಳಿದ್ದಾರೆ.