ಬೆಂಗಳೂರು:ಕೆನರಾ ಬ್ಯಾಂಕ್ ಪ್ರಾಯೋಜಿತ ರಾಮನಗರ ಜಿಲ್ಲೆ ಬಿಡದಿಯ ಕೆ.ಪಿ.ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭ ಕಲೆ (ಟೆರ್ರಾಕೋಟ) ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ತರಬೇತಿ ಉಚಿತ. ಕನಿಷ್ಠ ವಿದ್ಯಾರ್ಹತೆ 7ನೇ ತರಗತಿ ಉತ್ತೀರ್ಣ. ವಯೋಮಿತಿ 18ರಿಂದ 35 ವರ್ಷ. ನೇರ ಸಂದರ್ಶನ ಡಿಸೆಂಬರ್ 5 ರಿಂದ 18ರವರೆಗೆ ನಡೆಯಲಿದೆ. ತರಗತಿಗಳು ಡಿಸೆಂಬರ್ ಮೂರನೆಯ ವಾರದಲ್ಲಿ ಆರಂಭಗೊಳ್ಳುತ್ತವೆ. ಹೆಚ್ಚಿನ ಮಾಹಿತಿಗೆ 9900158885/9743272048 ಸಂಪರ್ಕಿಸಬಹುದು.