ಪ್ರಸಕ್ತ ವರ್ಷ ಕಾರ್ಖಾನೆಗೆ ಕಬ್ಬು ಪೂರೈಸಲು ಮಾಡಿದ ಒಪ್ಪಂದ ಪ್ರಮಾಣ 3ಲಕ್ಷ ಟನ್ ಮೀರಿದ್ದರೂ, ಬಂದಿರುವುದು ಅದರ ಅರ್ಧ ಭಾಗ ಮಾತ್ರ. ಉಳಿಕೆ ಕಬ್ಬು ಹಾವೇರಿ, ದಾವಣಗೆರೆ ಭಾಗದ ಮೂರು ಸಕ್ಕರೆ ಕಾರ್ಖಾನೆಗಳ ಪಾಲಾಗಿದೆ. ಕಬ್ಬಿನ ಕಟಾವಿಗೆ ಕೂಲಿಯಾಳುಗಳ ಸಮಸ್ಯೆ, ವೇತನ ಪಾವತಿಯಲ್ಲಿನ ವಿಳಂಬ, ಸಾಗಣೆ ಸಮಸ್ಯೆಗಳಿಂದ ಬೇಸತ್ತ ಕೃಷಿಕರು, ದಲಾಲರ ಸಹಕಾರದೊಂದಿಗೆ ಖಾಸಗಿ ಕಾರ್ಖಾನೆಯತ್ತ ಮುಖ ಮಾಡಿದ್ದಾರೆ.