ಕಳೆದ ವರ್ಷದ ಅಕ್ಟೋಬರ್ 24ರಂದು ಟಾಟಾ ಸನ್ಸ್ ಸಂಸ್ಥೆಯಿಂದ ಮಿಸ್ತ್ರಿ ಅವರನ್ನು ಹಠಾತ್ತಾಗಿ ಹೊರ ಹಾಕಲಾಗಿತ್ತು. ‘ಏರ್ ಏಷ್ಯಾ ಇಂಡಿಯಾ’ ವಿಮಾನಯಾನ ಸಂಸ್ಥೆಯ ವಹಿವಾಟಿನಲ್ಲಿ ₹ 22 ಕೋಟಿಗಳ ಅವ್ಯವಹಾರ ನಡೆದಿದ್ದು, ವೆಂಕಟರಮಣನ್ ಅವರು ಈ ಹಗರಣ ಮುಚ್ಚಿಹಾಕಲು ಹವಣಿಸಿದ್ದಾರೆ ’ ಎಂದು ಮಿಸ್ತ್ರಿ ಅವರು ತಮ್ಮ ಇ–ಮೇಲ್ ಸಂದೇಶದಲ್ಲಿ ಆರೋಪಿಸಿದ್ದರು.