<p><strong>ಬೆಂಗಳೂರು:</strong> ‘ಜೈನ ಧರ್ಮದ ಬಹುತೇಕ ಗ್ರಂಥಗಳು ರಚನೆಗೊಂಡ ಪ್ರಾಕೃತ ಭಾಷೆ ಅತ್ಯಂತ ಪ್ರಾಚೀನವಾದುದು. ಆ ಭಾಷೆಯ ಅಧ್ಯಯನಕ್ಕಾಗಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪನೆ ಮಾಡಲೇಬೇಕು’ಎಂದು ಸಾಹಿತಿ ಚಂದ್ರಶೇಖರ ಕಂಬಾರ ಒತ್ತಾಯಿಸಿದರು.</p>.<p>ನಗರದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಮಾರಂಭದಲ್ಲಿ ಎಸ್.ಜಿತೇಂದ್ರ ಕುಮಾರ್ ಅವರಿಗೆ ‘ಚಾವುಂಡರಾಯ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ಸಾಹಿತ್ಯ ಪರಿಚಾರಕರಾಗಿ, ಸಮಾಜ ಸೇವಕರಾಗಿ ಅನನ್ಯ ಸೇವೆ ಸಲ್ಲಿಸಿದ ಜಿತೇಂದ್ರ ಕುಮಾರ್ ಅವರಿಗೆ ಪ್ರಶಸ್ತಿ ಸಂದಿರುವುದು<br />ಸಂತಸದ ವಿಷಯ. ಕರ್ನಾಟಕ ಜೈನ ಭವನ, ಮೋತಿಖಾನೆ ತಿಮ್ಮಪ್ಪಯ್ಯ ಜೈನ ವಿದ್ಯಾರ್ಥಿ ನಿಲಯ ಸ್ಥಾಪಿಸಿದ ಕೀರ್ತಿ ಇವರದ್ದು’<br />ಎಂದು ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು.</p>.<p>ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಜಿತೇಂದ್ರ ಕುಮಾರ್, ‘ಕಸಾಪ ಅಧ್ಯಕ್ಷ ಮನು ಬಳಿಗಾರ ಅವರು, ಪ್ರಶಸ್ತಿಯ ದತ್ತಿ ಮೊತ್ತವನ್ನು<br />₹4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಬೇಕೆಂದು ಚಾರುಕೀರ್ತಿ ಭಟ್ಟಾಚಾರಕ ಸ್ವಾಮೀಜಿ ಅವರನ್ನು ಕೋರಿದ್ದರು. ₹2 ಲಕ್ಷ ಅನುದಾನ ನೀಡಲು ಸ್ವಾಮೀಜಿ ಅವರನ್ನು ಕೇಳಿಕೊಂಡಿದ್ದೆ. ಶೀಘ್ರದಲ್ಲಿಯೇ ಹಣ ಬರುವ ಭರವಸೆ ಇದೆ’ ಎಂದು ಪ್ರಕಟಿಸಿದರು.</p>.<p>‘ದತ್ತಿಯ ಮೊತ್ತದಿಂದ ವಾರ್ಷಿಕ ಬಡ್ಡಿ ₹48,000 ಬರಲಿದೆ. ನನಗೆ ದೊರೆತ ಪ್ರಶಸ್ತಿಯ ಮೊತ್ತ ₹30,000 ಸೇರಿದಂತೆ ₹1 ಲಕ್ಷ ಮೊತ್ತವನ್ನು ಮೂಲ ದತ್ತಿನಿಧಿಗೆ ನೀಡಲು ನಿರ್ಧರಿಸಿರುವೆ. ಮುಂದಿನ ಸಾಲಿನಿಂದ ದತ್ತಿ ಪ್ರಶಸ್ತಿಯ ಮೊತ್ತ ₹50,000ಕ್ಕೆ ಏರಲಿದೆ’ ಎಂದರು. ₹1 ಲಕ್ಷ ಮೊತ್ತದ ಚೆಕ್ಅನ್ನು ಮನು ಬಳಿಗಾರ ಅವರಿಗೆ ಹಸ್ತಾಂತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಜೈನ ಧರ್ಮದ ಬಹುತೇಕ ಗ್ರಂಥಗಳು ರಚನೆಗೊಂಡ ಪ್ರಾಕೃತ ಭಾಷೆ ಅತ್ಯಂತ ಪ್ರಾಚೀನವಾದುದು. ಆ ಭಾಷೆಯ ಅಧ್ಯಯನಕ್ಕಾಗಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪನೆ ಮಾಡಲೇಬೇಕು’ಎಂದು ಸಾಹಿತಿ ಚಂದ್ರಶೇಖರ ಕಂಬಾರ ಒತ್ತಾಯಿಸಿದರು.</p>.<p>ನಗರದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಮಾರಂಭದಲ್ಲಿ ಎಸ್.ಜಿತೇಂದ್ರ ಕುಮಾರ್ ಅವರಿಗೆ ‘ಚಾವುಂಡರಾಯ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ಸಾಹಿತ್ಯ ಪರಿಚಾರಕರಾಗಿ, ಸಮಾಜ ಸೇವಕರಾಗಿ ಅನನ್ಯ ಸೇವೆ ಸಲ್ಲಿಸಿದ ಜಿತೇಂದ್ರ ಕುಮಾರ್ ಅವರಿಗೆ ಪ್ರಶಸ್ತಿ ಸಂದಿರುವುದು<br />ಸಂತಸದ ವಿಷಯ. ಕರ್ನಾಟಕ ಜೈನ ಭವನ, ಮೋತಿಖಾನೆ ತಿಮ್ಮಪ್ಪಯ್ಯ ಜೈನ ವಿದ್ಯಾರ್ಥಿ ನಿಲಯ ಸ್ಥಾಪಿಸಿದ ಕೀರ್ತಿ ಇವರದ್ದು’<br />ಎಂದು ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು.</p>.<p>ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಜಿತೇಂದ್ರ ಕುಮಾರ್, ‘ಕಸಾಪ ಅಧ್ಯಕ್ಷ ಮನು ಬಳಿಗಾರ ಅವರು, ಪ್ರಶಸ್ತಿಯ ದತ್ತಿ ಮೊತ್ತವನ್ನು<br />₹4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಬೇಕೆಂದು ಚಾರುಕೀರ್ತಿ ಭಟ್ಟಾಚಾರಕ ಸ್ವಾಮೀಜಿ ಅವರನ್ನು ಕೋರಿದ್ದರು. ₹2 ಲಕ್ಷ ಅನುದಾನ ನೀಡಲು ಸ್ವಾಮೀಜಿ ಅವರನ್ನು ಕೇಳಿಕೊಂಡಿದ್ದೆ. ಶೀಘ್ರದಲ್ಲಿಯೇ ಹಣ ಬರುವ ಭರವಸೆ ಇದೆ’ ಎಂದು ಪ್ರಕಟಿಸಿದರು.</p>.<p>‘ದತ್ತಿಯ ಮೊತ್ತದಿಂದ ವಾರ್ಷಿಕ ಬಡ್ಡಿ ₹48,000 ಬರಲಿದೆ. ನನಗೆ ದೊರೆತ ಪ್ರಶಸ್ತಿಯ ಮೊತ್ತ ₹30,000 ಸೇರಿದಂತೆ ₹1 ಲಕ್ಷ ಮೊತ್ತವನ್ನು ಮೂಲ ದತ್ತಿನಿಧಿಗೆ ನೀಡಲು ನಿರ್ಧರಿಸಿರುವೆ. ಮುಂದಿನ ಸಾಲಿನಿಂದ ದತ್ತಿ ಪ್ರಶಸ್ತಿಯ ಮೊತ್ತ ₹50,000ಕ್ಕೆ ಏರಲಿದೆ’ ಎಂದರು. ₹1 ಲಕ್ಷ ಮೊತ್ತದ ಚೆಕ್ಅನ್ನು ಮನು ಬಳಿಗಾರ ಅವರಿಗೆ ಹಸ್ತಾಂತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>