<p>‘ಸರ್ಕಾರಿ ಜಾಬ್ಗಾಗಿ ನಮ್ಮ ಯೂಥ್ಸ್ ಹೀಗೆ ಬೀದೀಲಿ ಪ್ರತಿಭಟಿಸೋದು ನೋಡಿದರೆ ಕರುಳು ಚುರ್ ಅನ್ನುತ್ತೆ...’ ಎಂದು ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದ ಕಮಲ ಪಕ್ಷದ ಮುಖಂಡ ಮುದ್ದಣ್ಣ. </p>.<p>‘ಕ್ಯಾಮೆರಾ ಆಫ್ ಮಾಡಿದ ಮೇಲೂ ಆ್ಯಕ್ಟ್ ಮಾಡೋದು ನಿಲ್ಲಿಸ್ತಿಲ್ವಲ್ಲಯ್ಯ ನೀನು’ ನಗುತ್ತಾ ಹೇಳಿದ ಕೈ ಪಕ್ಷದ ನಾಯಕ ವಿಜಿ. </p>.<p>‘ಇಂತಹ ವಿಷಯ ಚರ್ಚೆಗೆ ಬಂದಾಗ ನಾನು ಫುಲ್ ಇನ್ವಾಲ್ವ್ ಆಗಿಬಿಡ್ತೀನಿ’ ಎಂದು ನಗುತ್ತಾ ಎಣ್ಣೆ ಗ್ಲಾಸ್ ಕೈಗೆತ್ತಿಕೊಂಡ ಮುದ್ದಣ್ಣ. </p>.<p>‘ಆದರೂ, ಮೊನ್ನೆ ಯುವಕರು ಪ್ರತಿಭಟನೆ ಮಾಡೋವಾಗ ನೀನು ಇನ್ನಷ್ಟು ಎಮೋಷನಲ್ ಆಗಬೇಕಿತ್ತು. ನಮ್ ಪಕ್ಷಕ್ಕೆ ಸ್ವಲ್ಪ ಜಾಸ್ತೀನೆ ಬೈಬೇಕಿತ್ತು’.</p>.<p>‘ನೀನೂ ಅಷ್ಟೇ, ನೀವು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀವಿ ಅಂದ್ರಲ್ಲ, ಯಾಕ್ ಮಾಡಿಲ್ಲ ಅಂತ ಹೇಳೋವಾಗ ಕಣ್ಣುಗಳನ್ನು ಇನ್ನಷ್ಟು ಕೆಂಪಗೆ ಮಾಡ್ಕೊಬೇಕಿತ್ತು. ಜೋರಾಗಿ ಹಲ್ಲು ಕಚ್ಚಿ ಹೇಳಿದ್ರೆ ತುಂಬಾ ಎಫೆಕ್ಟಿವ್ ಆಗಿರೋದು’ ಎಂದು ಸಿನಿಮಾ ಡೈರೆಕ್ಟರ್ ರೀತಿ ಹೇಳಿದ ಮುದ್ದಣ್ಣ.</p>.<p>‘ಹೌದು, ನನಗೂ ಹಾಗೇ ಅನಿಸ್ತು. ಆಮೇಲೆ, ನೀನು ಒಳಮೀಸಲಾತಿ ಕಾರಣ ಲೇಟಾಯ್ತು ಅಂತ ನೆಪ ಹೇಳ್ತಿದ್ಯಲ್ಲ, ಅದನ್ನ ನಡುಗುವ ದನಿಯಲ್ಲಿ, ಕಣ್ಣಂಚಲ್ಲಿ ಸ್ವಲ್ಪ ನೀರು ತಂದುಕೊಂಡು ಹೇಳಿದ್ರೆ ಪ್ರತಿಭಟನಾಕಾರರೆಲ್ಲ ಫ್ಲ್ಯಾಟ್ ಆಗಿಬಿಟ್ಟಿರೋರು’.</p>.<p>‘ನಮ್ಮ ನಮ್ಮ ಮಕ್ಕಳನ್ನ ಕಣ್ಮುಂದೆ ತಂದ್ಕೊಂಡ್ರೆ ಹಾಗೆಲ್ಲ ನ್ಯಾಚುರಲ್ ಆಗಿ ಕಣ್ಣಲ್ಲಿ ನೀರು ಬರುತ್ತೆ. ಬೇರೆಯವರ ಮಕ್ಕಳ ಪರವಾಗಿ ಮಾತನಾಡೋವಾಗ ಆ ಎಮೋಷನ್ಸ್ ಎಲ್ಲ ಹೇಗ್ ತಾನೆ ಬರುತ್ತೆ ಹೇಳು’ ಎಂದ ಮುದ್ದಣ್ಣ, ಹೊರಟು ನಿಂತ ವಿಜಿಗೆ ಕೇಳಿದ, ‘ಅದು ಸರಿ, ಈಗ ನೀನೆಲ್ಲಿಗೆ ಡ್ರಾಮಾ ಮಾಡೋಕೆ ಹೊರಟೆ’.</p>.<p>‘ನಮ್ ಎಮ್ಮೆಲ್ಲೆನ ಮಿನಿಸ್ಟರ್ ಮಾಡಿ, ನಮ್ ಡಿಸಿಎಂನ ಸಿಎಂ ಮಾಡಿ ಅಂತ ಪ್ರತಿಭಟಿಸೋಕೆ ಹೋಗಬೇಕಪ್ಪ’ ಎಂದು ಕಾಲ್ಕಿತ್ತ ವಿಜಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸರ್ಕಾರಿ ಜಾಬ್ಗಾಗಿ ನಮ್ಮ ಯೂಥ್ಸ್ ಹೀಗೆ ಬೀದೀಲಿ ಪ್ರತಿಭಟಿಸೋದು ನೋಡಿದರೆ ಕರುಳು ಚುರ್ ಅನ್ನುತ್ತೆ...’ ಎಂದು ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದ ಕಮಲ ಪಕ್ಷದ ಮುಖಂಡ ಮುದ್ದಣ್ಣ. </p>.<p>‘ಕ್ಯಾಮೆರಾ ಆಫ್ ಮಾಡಿದ ಮೇಲೂ ಆ್ಯಕ್ಟ್ ಮಾಡೋದು ನಿಲ್ಲಿಸ್ತಿಲ್ವಲ್ಲಯ್ಯ ನೀನು’ ನಗುತ್ತಾ ಹೇಳಿದ ಕೈ ಪಕ್ಷದ ನಾಯಕ ವಿಜಿ. </p>.<p>‘ಇಂತಹ ವಿಷಯ ಚರ್ಚೆಗೆ ಬಂದಾಗ ನಾನು ಫುಲ್ ಇನ್ವಾಲ್ವ್ ಆಗಿಬಿಡ್ತೀನಿ’ ಎಂದು ನಗುತ್ತಾ ಎಣ್ಣೆ ಗ್ಲಾಸ್ ಕೈಗೆತ್ತಿಕೊಂಡ ಮುದ್ದಣ್ಣ. </p>.<p>‘ಆದರೂ, ಮೊನ್ನೆ ಯುವಕರು ಪ್ರತಿಭಟನೆ ಮಾಡೋವಾಗ ನೀನು ಇನ್ನಷ್ಟು ಎಮೋಷನಲ್ ಆಗಬೇಕಿತ್ತು. ನಮ್ ಪಕ್ಷಕ್ಕೆ ಸ್ವಲ್ಪ ಜಾಸ್ತೀನೆ ಬೈಬೇಕಿತ್ತು’.</p>.<p>‘ನೀನೂ ಅಷ್ಟೇ, ನೀವು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀವಿ ಅಂದ್ರಲ್ಲ, ಯಾಕ್ ಮಾಡಿಲ್ಲ ಅಂತ ಹೇಳೋವಾಗ ಕಣ್ಣುಗಳನ್ನು ಇನ್ನಷ್ಟು ಕೆಂಪಗೆ ಮಾಡ್ಕೊಬೇಕಿತ್ತು. ಜೋರಾಗಿ ಹಲ್ಲು ಕಚ್ಚಿ ಹೇಳಿದ್ರೆ ತುಂಬಾ ಎಫೆಕ್ಟಿವ್ ಆಗಿರೋದು’ ಎಂದು ಸಿನಿಮಾ ಡೈರೆಕ್ಟರ್ ರೀತಿ ಹೇಳಿದ ಮುದ್ದಣ್ಣ.</p>.<p>‘ಹೌದು, ನನಗೂ ಹಾಗೇ ಅನಿಸ್ತು. ಆಮೇಲೆ, ನೀನು ಒಳಮೀಸಲಾತಿ ಕಾರಣ ಲೇಟಾಯ್ತು ಅಂತ ನೆಪ ಹೇಳ್ತಿದ್ಯಲ್ಲ, ಅದನ್ನ ನಡುಗುವ ದನಿಯಲ್ಲಿ, ಕಣ್ಣಂಚಲ್ಲಿ ಸ್ವಲ್ಪ ನೀರು ತಂದುಕೊಂಡು ಹೇಳಿದ್ರೆ ಪ್ರತಿಭಟನಾಕಾರರೆಲ್ಲ ಫ್ಲ್ಯಾಟ್ ಆಗಿಬಿಟ್ಟಿರೋರು’.</p>.<p>‘ನಮ್ಮ ನಮ್ಮ ಮಕ್ಕಳನ್ನ ಕಣ್ಮುಂದೆ ತಂದ್ಕೊಂಡ್ರೆ ಹಾಗೆಲ್ಲ ನ್ಯಾಚುರಲ್ ಆಗಿ ಕಣ್ಣಲ್ಲಿ ನೀರು ಬರುತ್ತೆ. ಬೇರೆಯವರ ಮಕ್ಕಳ ಪರವಾಗಿ ಮಾತನಾಡೋವಾಗ ಆ ಎಮೋಷನ್ಸ್ ಎಲ್ಲ ಹೇಗ್ ತಾನೆ ಬರುತ್ತೆ ಹೇಳು’ ಎಂದ ಮುದ್ದಣ್ಣ, ಹೊರಟು ನಿಂತ ವಿಜಿಗೆ ಕೇಳಿದ, ‘ಅದು ಸರಿ, ಈಗ ನೀನೆಲ್ಲಿಗೆ ಡ್ರಾಮಾ ಮಾಡೋಕೆ ಹೊರಟೆ’.</p>.<p>‘ನಮ್ ಎಮ್ಮೆಲ್ಲೆನ ಮಿನಿಸ್ಟರ್ ಮಾಡಿ, ನಮ್ ಡಿಸಿಎಂನ ಸಿಎಂ ಮಾಡಿ ಅಂತ ಪ್ರತಿಭಟಿಸೋಕೆ ಹೋಗಬೇಕಪ್ಪ’ ಎಂದು ಕಾಲ್ಕಿತ್ತ ವಿಜಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>